Friday, August 21, 2026

BDA Apartments

Home Front Page ತೀವ್ರಗೊಂಡ ಹೋರಾಟ: ಕಬ್ಬು ತುಂಬಿದ ಟ್ರ್ಯಾಕ್ಟರ್ ಉರುಳಿಸಿ ಬೆಂಕಿ ಹಚ್ಚಿದ ರೈತರು

ತೀವ್ರಗೊಂಡ ಹೋರಾಟ: ಕಬ್ಬು ತುಂಬಿದ ಟ್ರ್ಯಾಕ್ಟರ್ ಉರುಳಿಸಿ ಬೆಂಕಿ ಹಚ್ಚಿದ ರೈತರು

ಬಾಗಲಕೋಟೆ,ನವೆಂಬರ್,13,2025 (www.justkannada.in): ಪ್ರತಿ ಟನ್ ಕಬ್ಬಿಗೆ 3500 ರೂ. ನಿಗದಿ ಮಾಡುವಂತೆ ಆಗ್ರಹಿಸಿ ಬಾಗಲಕೋಟೆಯ ಮುಧೋಳದಲ್ಲಿ ರೈತರು ನಡೆಸುತ್ತಿರುವ ಹೋರಾಟ ತೀವ್ರ ಸ್ವರೂಪ ಪಡೆದಿದೆ.

ಬಾಗಲಕೋಟೆಯ ಮಹಾಲಿಂಗಾಪುರದ ಬಳಿ ಕಬ್ಬಿನ ಕಾರ್ಖಾನೆಗೆ ತೆರಳುತ್ತಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್ ಟ್ರ್ಯಾಲಿಯನ್ನು ಉರುಳಿಸಿ ಕಬ್ಬಿಗೆ ಪ್ರತಿಭಟನಾನಿರತ ರೈತರು ಬೆಂಕಿ ಹಚ್ಚಿದ ಘಟನೆ ನಡೆದಿದೆ.

ಮುಧೋಳದಲ್ಲಿ ರೈತರ ಆಕ್ರೋಶ ತೀವ್ರಗೊಂಡಿದ್ದು,  ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ದ ಗರಂ ಆಗಿದ್ದು  ಸಮೀರವಾಡಿಯ ಗೋದಾವರಿ ಕಾರ್ಖಾನೆಗೆ ಮುತ್ತಿಗೆ ಹಾಕಲು ಪ್ರತಿಭಟನಾನಿರತ ರೈತರು ತೆರಳುತ್ತಿದ್ದರು. ಈ ವೇಳೆ  ಕಾರ್ಖಾನೆಗೆ ಕಬ್ಬು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಗೆ ಮಹಾಲಿಂಗಾಪುರದ ಬಳಿ ರೈತರು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Farmers, protest, Bagalakote, tractor, loaded, fire