ರೈತರಿಗೆ ಗುಡ್ ನ್ಯೂಸ್: ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆ..

ಬೆಂಗಳೂರು,ಜುಲೈ,27,2023(www.justkannada.in): ಕೇಂದ್ರ ಸರ್ಕಾರ ರೈತರಿಗೆ ಗುಡ್ ನ್ಯೂಸ್ ನೀಡಿದ್ದು,  ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣವನ್ನ ಬಿಡುಗಡೆ ಮಾಡಲಾಗಿದೆ.

ರಾಜಸ್ತಾನದ ಸಿಕರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 14ನೇ ಕಂತಿನ ಹಣ ಬಿಡುಗಡೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪ್ರಧಾನಿ ಮೋದಿ,  9 ಕೋಟಿ ರೈತರ ಖಾತೆಗೆ  20 ಸಾವಿರ ಕೋಟಿ ಹಣ ವರ್ಗಾವಣೆ  ಮಾಡಲಾಗಿದೆ. ರೈತರ ಕಷ್ಟ ಸುಖ  ಆಲಿಸಲು ಸರ್ಕಾರ ಬದ್ಧವಾಗಿದೆ ಎಂದರು.

ಅನಾರೋಗ್ಯ ಹಿನ್ನೆಲೆ  ಸಿಎಂ ಗೆಹ್ಲೋಟ್ ಕಾರ್ಯಕ್ರಮಕ್ಕೆ ಬಂದಿಲ್ಲ. ಅವರ ಉತ್ತಮ ಆರೋಗ್ಯಕ್ಕೆ  ಪ್ರಾರ್ಥಿಸುತ್ತೇನೆ ಎಂದು ಪ್ರಧಾನಿ ಮೋದಿ ತಿಳಿಸಿದರು. ಭಾರತ ಸರ್ಕಾರವು ವಾರ್ಷಿಕವಾಗಿ 6 ಸಾವಿರ ರೂ.ಗಳನ್ನು ಮೂರು ವಿಭಿನ್ನ ಕಂತುಗಳಲ್ಲಿ ರೈತರ ಖಾತೆ ಹಾಕುತ್ತಿದೆ.  ಇದಕ್ಕಾಗಿ 14 ನೇ ಕಂತು ನಡೆಯುತ್ತಿದೆ.

Key words: farmers- 14th installment -PM Kisan Samman Yojana –Narendra modi