ಸಂಸದ ಡಿಕೆ ಸುರೇಶ್’ಗೂ ಇಡಿ ಶಾಕ್ ! ವಿಚಾರಣೆಗೆ ಹಾಜರಾಗುವಂತೆ ಸೂಚನೆ

ಬೆಂಗಳೂರು, ಸೆಪ್ಟೆಂಬರ್ 30, 2019 (www.justkannada.in): ಸಂಸದ ಡಿ.ಕೆ.ಸುರೇಶ್ ಗೂ ಇಡಿ ಶಾಕ್ ನೀಡಿದೆ.

ವಿಚಾರಣೆಗೆ ಹಾಜರಾಗುವಂತೆ ಡಿ.ಕೆ.ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಲೋಕಸಭೆ ಚುನಾವಣೆಯಲ್ಲಿ 338 ಕೋಟಿ ರೂ. ಆಸ್ತಿ ಘೋಷಿಸಿದ್ದ ಡಿ.ಕೆ. ಸುರೇಶ್, ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಗೆ ಸಾಲ ನೀಡಿರುವುದು, ತಂದೆ ಕೆಂಪೇಗೌಡ ಆಸ್ತಿ ಸುರೇಶ್ ಹೆಸರಿಗೆ ವರ್ಗಾವಣೆ, ಹಾಗೂ ಪ್ಲ್ಯಾಟ್ ನಲ್ಲಿ ಸಿಕ್ಕ ಹಣದಲ್ಲಿ 21 ಲಕ್ಷ ರೂ ನನ್ನದೆಂದಿದ್ದ ಡಿ.ಕೆ.ಸುರೇಶ್ ಗೆ ಇಡಿ ನೋಟಿಸ್ ನೀಡಿದೆ.

ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಡಿ.ಕೆ.ಶಿವಕುಮಾರ್ ಬಂಧನದಲ್ಲಿದ್ದು, ಇದೀಗ ಅವರ ಸಹೋದರ ಡಿ.ಕೆ.ಸುರೇಸ್ ಗೆ ನೋಟಿಸ್ ನೀಡಿರುವುದು ಡಿಕೆಶಿ ಕುಟುಂಬಕ್ಕೆ ಬಿಗ್ ಶಾಕ್ ಎದುರಾಗಿದೆ.