ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ: ತಾಕತ್ತಿದ್ರೆ ಸ್ವಂತ ಪಕ್ಷ ಕಟ್ಟಲಿ ನೋಡೋಣ-ಸಿದ್ದರಾಮಮಯ್ಯಗೆ ಹೆಚ್.ಡಿಕೆ ಸವಾಲು.

ಬೆಂಗಳೂರು,ಮಾರ್ಚ್,30,2023(www.justkannada.in): ಜೆಡಿಎಸ್ ಸ್ವಂತಬಲದಿಂದ ಅಧಿಕಾರಕ್ಕೆ ಬರಲ್ಲ. ಅತಂತ್ರ ಸ್ಥಿತಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಜೆಡಿಎಸ್ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ.  ತಾಕತ್ತಿದ್ರೆ ಸ್ವಂತ ಪಕ್ಷ ಕಟ್ಟಲಿ ನೋಡೋಣ ಎಂದು ಸಿದ‍್ಧರಾಮಯ್ಯಗೆ ಹೆಚ್.ಡಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

ಇಂದು ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯನವರ ಇವತ್ತಿನ ಹೇಳಿಕೆ ವಿಶ್ವದ ಎಂಟನೇ ಅದ್ಭುತ. ಜೆಡಿಎಸ್ ನಲ್ಲಿ ಯಾರು ಪಾಳೆಗಾರಿಕೆ ಮಾಡಿದರು ಅಂತಾ ಗೊತ್ತಿದೆ. ನಾವು ಸ್ಟೇಜ್ ಹಾಕಿ ಜನ ಸೇರಿಸಿದರೆ ಅವರು ಬಂದು ಕೂರುತ್ತಿದ್ದರು. ಕಾಲ್ಮೇಲೆ ಕಾಲು ಹಾಕಿ ಕೂರುತ್ತಿದ್ದರು. ಅವರನ್ನ ವೇದಿಕೆಯೇರಿಸಿ ನಾವು ರಸ್ತೆಯಲ್ಲಿ  ನಿಲ್ಲುತ್ತಿದ್ದವು. ಸಿದ್ದರಾಮಯ್ಯ ಪಾಳೆಗಾರಿಕೆ ಮಾಡುತ್ತಾ ದೇವೇಗೌಡರನ್ನು ಹೆದರಿಸಿಕೊಂಡು ಇದ್ದರು. ಬ್ಯಾನರ್‌ ನಲ್ಲಿ ಫೋಟೋ ಇಲ್ಲದಿದ್ದರೆ ಸಭೆಗೆ ಬರುವುದಿಲ್ಲ ಎನ್ನುತ್ತಿದ್ದರು. 2006ರಲ್ಲಿ ಪಕ್ಷ ತೊರದು  ಮೈಸೂರು ಭಾಗದಲ್ಲಿ ಶಾಸಕರನ್ನ ಹೈಜಾಕ್ ಮಾಡಿದ್ರಿ ಎಂದು ವಾಗ್ದಾಳಿ ನಡೆಸಿದರು.

JDS  ನಿಮ್ಮನ್ನು ಬೆಳೆಸದಿದ್ದರೆ  ಈಗ ನೀವು ಕಾಂಗ್ರೆಸ್ಸಿಗರು ಎಂದು ಎಲ್ಲಿ ಕರೆಯುತ್ತಿದ್ದರು.  ನೀವು ಪಕ್ಷ ಮುಗಿಸೋಕೆ ಹೋರಟಾಗ ನಾವು ಮಧ್ಯ ಪ್ರವೇಶಿಸಿದ್ವಿ ಎಂದು ಹೆಚ್.ಡಿಕೆ ಹರಿಹಾಯ್ದರು.

Key words: Don’t -talk lightly –about- JDS- HDK- challenges -Siddaramaiah.