ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆ ಶಿವಕುಮಾರ್ ಒದ್ದಾಡುತ್ತಿದ್ದಾರೆ- ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್.

ತುಮಕೂರು,ಡಿಸೆಂಬರ್,9,2022(www.justkannada.in): ಕೆಪಿಸಿಸಿ ಅಧ್ಯಕ್ಷ ಸ್ಥಾನ ನಿಭಾಯಿಸಲು ಡಿಕೆ ಶಿವಕುಮಾರ್ ಒದ್ದಾಡುತ್ತಿದ್ದಾರೆ. ನಾವೆಲ್ಲ ಡಿಕೆಶಿ ಜೊತೆ ಇದ್ದೇವೆ. ಧೈರ್ಯವಾಗಿರಿ ಎಂದು  ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.

ತುಮಕೂರಿನ ಕೊರಟಗೆರೆಯಲ್ಲಿ ಇಂದು ಮಾತನಾಡಿದ ಡಾ.ಜಿ.ಪರಮೇಶ್ವರ್, ಯಾವುದೇ ವ್ಯಕ್ತಿ ಪಕ್ಷ ಬರಬೇಕಾದರೇ ಉದ್ದೇಶ, ಕ್ಷೇತ್ರದ ಕೆಲಸ ಆಗಬೇಕು. ಕೆಲಸ ಮಾಡುವ ಸಾಮರ್ಥ್ಯ ಇರಬೇಕು.  ಆ ಸಾಮರ್ಥ್ಯ ನನಗಿದೆ ಅಂದುಕೊಂಡಿದ್ದೇನೆ.  ಬೇರೆಯವರಿಗೆ ಇದೆಯೋ ಇಲ್ಲವೋ ಗೊತ್ತಿಲ್ಲ. ಸಮರ್ಥ ನಾಯಕ ಎಂದು ನನ್ನನ್ನ  ಪಕ್ಷ ಗುರುತಿಸಿದೆ ಎಂದರು.

Key words: DK Shivakumar -struggling – KPCC President- Former DCM- Dr. G. Parameshwar.