Sunday, August 23, 2026

BDA Apartments

Home Front Page ಗ್ಯಾಸ್ ಸಿಗದೆ ಆಟೋ ಚಾಲಕರ ಪರದಾಟ: ಕೇಂದ್ರದ ವಿರುದ್ದ ಡಿಕೆ ಶಿವಕುಮಾರ್ ಕಿಡಿ

ಗ್ಯಾಸ್ ಸಿಗದೆ ಆಟೋ ಚಾಲಕರ ಪರದಾಟ: ಕೇಂದ್ರದ ವಿರುದ್ದ ಡಿಕೆ ಶಿವಕುಮಾರ್ ಕಿಡಿ

ಬೆಂಗಳೂರು,ಏಪ್ರಿಲ್,4,2026 (www.justkannada.in):  ಗ್ಯಾಸ್ ಸಿಗದೆ ಆಟೋ ಚಾಲಕರು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ದ ಡಿಸಿಎಂ ಡಿಕೆ ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್, ಕೂಡಲೇ ಕೇಂದ್ರ ಸರ್ಕಾರ ಸಮಸ್ಯೆಯತ್ತ ಗಮನ ಹರಿಸಲಿ ನಮ್ಮ ಕೈಯಲ್ಲಿ ಏನೀಲ್ಲ ಎಲ್ಲ ಕೇಂದ್ರವೇ ಕೊಡುವಂತಹದ್ದು ಎಂದರು.

ಕೇಂದ್ರ ಸರ್ಕಾರ ಸರಿಯಾದ ರೀತಿಯ ನೀತಿ ರೂಪಿಸಬೇಕಿತ್ತು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಿತ್ತು ಆದರೆ ವಿಫಲ ಆಗುತ್ತಿದೆ.  ಕೇಂದ್ರ ಸರ್ಕಾರದ  ಬಗ್ಗೆ ಬಿಜೆಪಿ ಯಾಕೆ ಮಾತಾಡುತ್ತಿಲ್ಲ.  ಬಿಜೆಪಿ ಅವರು ಹೇಳಬೇಕಿತ್ತು ನಮ್ಮಿಂದ ತೊಂದರೇ ಆಗಿದೆ ನಮ್ಮನ್ನು ಕ್ಷಮಿಸಬೇಕು  ಎಂದು ಅವರು ಹೇಳಬೇಕು. ಆದರೆ ಅವರು ಮಾಡಿರೋ ತೊಂದರೆ ಮುಚ್ಚಿಕೊಳ್ಳುತ್ತಿದ್ದಾರೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.

Key words: Auto drivers, lack of gas,  DK Shivakumar