ಬೆಂಗಳೂರಿನಲ್ಲಿ ಕೋಟಕ್ ಮಹೀಂದ್ರ ಬ್ಯಾಂಕ್ ​​ನ ಡೆಪ್ಯುಟಿ ಮ್ಯಾನೇಜರ್ ಆತ್ಮಹತ್ಯೆಗೆ ಶರಣು..

ಬೆಂಗಳೂರು,ನ,11,2019(www.justkannada.in): ಕೋಟಕ್ ಮಹೀಂದ್ರ ಬ್ಯಾಂಕ್​​ನ ಡೆಪ್ಯುಟಿ ಮ್ಯಾನೇಜರ್ ರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರೋಹಿತ್ (27) ಆತ್ಮಹತ್ಯೆ ಮಾಡಿಕೊಂಡ ಕೋಟಕ್ ಮಹೀಂದ್ರ ಬ್ಯಾಂಕ್​​ ನ ಡೆಪ್ಯುಟಿ ಮ್ಯಾನೇಜರ್. ದೊಮ್ಮಲೂರಿನ ಫ್ಲಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ರೋಹಿತ್ ಜಾರ್ಖಂಡ್ ಮುಖ್ಯಮಂತ್ರಿ ಮಾಜಿ ಸಲಹೆಗಾರ ಹರೀಂದರ್ ಪುತ್ರ. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Deputy manager -Kotak Mahindra Bank -commits suicide -Bangalore