ಇಂದು ಅಥವಾ ನಾಳೆ ಆರ್.ಆರ್ ನಗರ ಉಪಚುನಾವಣಾ ಬಿಜೆಪಿ ಅಭ್ಯರ್ಥಿ ಘೋಷಣೆ- ಸಿ.ಟಿ ರವಿ…

ಬೆಂಗಳೂರು,ಅಕ್ಟೋಬರ್,13,2020(www.justkannada.in):  ಇಂದು ಅಥವಾ ನಾಳೆ ಆರ್.ಆರ್ ನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತಿಳಿಸಿದ್ದಾರೆ.jk-logo-justkannada-logo

ಚುನಾವಣೆಗೆ ತಡೆ ನೀಡುವಂತೆ ತುಳಸಿ ಮುನಿರಾಜುಗೌಡ ಸಲ್ಲಿಸಿದ್ಧ ಅರ್ಜಿಯನ್ನ ಸುಪ್ರೀಂಕೋರ್ಟ್ ವಜಾಗೊಳಿಸಿ ಆರ್.ಆರ್ ನಗರ ಉಪಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ.declaration-rr-nagar-by-election-bjp-candidate-today-tomorrow-ct-ravi

ಈ ನಡುವೆ ಅಭ್ಯರ್ಥಿ ಘೋಷಣೆ ಬಗ್ಗೆ ಮಾಹಿತಿ ನೀಡಿದ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಪಕ್ಷಕ್ಕಾಗಿ ದುಡಿಯುವವರಿಗೆ ಬಿಜೆಪಿಯಲ್ಲಿ ಬೆಲೆ ಇರುತ್ತದೆ. ಸಂಘಟನಾ ಚತುರರಿಗೆ ಪಕ್ಷ ಯಾವತ್ತೂ ಮಣೆ ಹಾಕುತ್ತದೆ. ಇಂದು ಅಥವಾ ನಾಳೆ ಆರ್.ಆರ್ ನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡಲಾಗುತ್ತದೆ ಎಂದು ತಿಳಿಸಿದರು.

Key words: Declaration- RR Nagar -by-election -BJP candidate -today – tomorrow-CT Ravi