Thursday, August 13, 2026

BDA Apartments

Home Front Page ವೈಭವದಿಂದ ಕಾವೇರಿ ಆರತಿ ನಡೆಸಲು ನಿರ್ಧಾರ – ಡಿಸಿಎಂ ಡಿಕೆ ಶಿವಕುಮಾರ್

ವೈಭವದಿಂದ ಕಾವೇರಿ ಆರತಿ ನಡೆಸಲು ನಿರ್ಧಾರ – ಡಿಸಿಎಂ ಡಿಕೆ ಶಿವಕುಮಾರ್

ಬೆಂಗಳೂರು,ಜೂನ್,25,2025 (www.justkannada.in):  ಕೆಆರ್ ಎಸ್ ಜಲಾಶಯದಿಂದ ಬಹಳ ದೂರದಲ್ಲಿ ಕಾವೇರಿ ಆರತಿ ಮಾಡುತ್ತೇವೆ. ವೈಭವದಿಂದ ಕಾವೇರಿ ಆರತಿ ನಡೆಸಲು ನಿರ್ಧರಿಲಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.

ಕಾವೇರಿ ಆರತಿಗೆ ರೈತರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇಂದು ರೈತರ ಜೊತೆ ಡಿಸಿಎಂ ಡಿಕೆ ಶಿವಕುಮಾರ್ ಸಭೆ ನಡೆಸಿ ಚರ್ಚಿಸಿದರು. ಸಭೆ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್,  ಮಂಡ್ಯ ಜಿಲ್ಲೆ ರೈತರಿಗೆ ಅವರದ್ದೇ ಆದ ಆತಂಕಗಳು ಇರುತ್ತವೆ. ರೈತರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.  ನಂಬಿಕೆ ಪ್ರಯತ್ನ ವಿಫಲವಾಗಬಹುದು ಪ್ರಾರ್ಥನೆ ವಿಫಲವಾಗಲ್ಲ ಗಂಗಾ ಆರತಿ ನೋಡಿದ್ದೇನೆ. ತುಂಗಾ ಆರತಿ ನಡೆಯುತ್ತಿದೆ.  ಕಾವೇರಿ ಆರತಿ ನಡೆಯಬೇಕೆಂಬ ಉದ್ದೇಶವಿದೆ ಎಂದರು.

ಪ್ರವಾಸಿಗರನ್ನ ಹೆಚ್ಚಿಸುವುದೇ ನಮ್ಮ ಗುರಿಯಾಗಿದೆ.  ಕಾವೇರಿಗೆ ನಮನ ಸಲ್ಲಿಸಲು ಅನೇಕರು ಸಲಹೆ ಕೊಟ್ಟಿದ್ದಾರೆ.  ಕಾವೇರಿ ಎಲ್ಲರ ಆಸ್ತಿ ಇಲ್ಲದಿದ್ರೆ ಬೆಂಗಳೂರಿಗೆ ಕುಡಿಯಲು ನೀರಿಲ್ಲ  ಉದ್ಯೋಗ ಸೃಷ್ಠಿ ಜೊತೆ ಪ್ರವಾಸಿಗರ ಆಕರ್ಷಣೆ ಆಗಲಿದೆ.  ಕೆಲವರು ತಪ್ಪು ಗ್ರಹಿಕೆಯಿಂದ ವಿರೋಧ ವ್ಯಕ್ತಪಡಿಸಿದ್ದಾರೆ. ವೈಭವದಿಂದ ಕಾವೇರಿ ಆರತಿ ನಡೆಸಲು ನಿರ್ಧಾರ ಮಾಡಲಾಗಿದೆ. ಕೇಂದ್ರ ಸಚಿವ ಹೆಚ್ ಡಿಕೆ ಅಪಸ್ವರಕ್ಕೆ ತಲೆಕೆಡಿಸಿಕೊಳ್ಳಲ್ಲ ಎಂದರು.vtu

Key words: Decision, Cauvery Arati, DCM, DK Shivakumar