Friday, August 21, 2026

BDA Apartments

Home Front Page ಯಾವ ಸರ್ಕಾರ ಬಂದ್ರೂ ಗ್ಯಾರಂಟಿ ನಿಲ್ಲಿಸಲು ಸಾಧ್ಯವಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ಯಾವ ಸರ್ಕಾರ ಬಂದ್ರೂ ಗ್ಯಾರಂಟಿ ನಿಲ್ಲಿಸಲು ಸಾಧ್ಯವಿಲ್ಲ- ಡಿಸಿಎಂ ಡಿಕೆ ಶಿವಕುಮಾರ್

ದಾವಣಗೆರೆ,ಏಪ್ರಿಲ್,7,2026 (www.justkannada.in):  ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಗ್ಯಾರಂಟಿ ಯೋಜನೆಗಳನ್ನ ನಿಲ್ಲಿಸಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.

ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಶಾಮನೂರು ಪರ  ರೋಡ್ ಶೋ ನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿಯಾಗಿ ಮತಯಾಚಿಸಿದರು. ರೋಡ್ ಶೋ ಅಂತ್ಯವಾಗಿದ್ದು ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ.

ಈ ವೇಳೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿಯ ನಿಜಬಣ್ಣ ಜನರಿಗೆ ಗೊತ್ತಿದೆ. ಗ್ಯಾರಂಟಿ ಕೊಡಬಾರದು ಎಂದು ಬಿಜೆಪಿ ಕೋರ್ಟ್ ಗೆ ಹೋದರು. ಆದರೆ ಕೋರ್ಟ್ ಗ್ಯಾರಂಟಿಯನ್ನ ಹೊಸ ಯೋಜನೆ ಅಲ್ಲ ಎಂದು ನೋಟೀಸ್ ಕೊಟ್ಟಿದೆ. ಯಾವ ಸರ್ಕಾರ ಬಂದರೂ ಗ್ಯಾರಂಟಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

Key words: Davanagere, By-election, guarantee, DCM, DK Shivakumar