Saturday, August 22, 2026

BDA Apartments

Home Front Page ರಾತ್ರಿ ಸಂಚಾರ ನಿಷೇಧ ತೆರವಿಗೆ ಮಾರ್ಗ- ಪ್ರಿಯಾಂಕಾ ಗಾಂಧಿ ಭರವಸೆ

ರಾತ್ರಿ ಸಂಚಾರ ನಿಷೇಧ ತೆರವಿಗೆ ಮಾರ್ಗ- ಪ್ರಿಯಾಂಕಾ ಗಾಂಧಿ ಭರವಸೆ

ವಯನಾಡು,ಏಪ್ರಿಲ್,7,2026 (www.justkannada.in): ಕೇರಳ–ಕರ್ನಾಟಕ ಅರಣ್ಯ ಪ್ರದೇಶದ ಮಧ್ಯೆ ಜಾರಿಯಲ್ಲಿರುವ ರಾತ್ರಿ ವಾಹನ ಸಂಚಾರ ನಿಷೇಧವನ್ನು ತೆರವುಗೊಳಿಸುವ ಕುರಿತು ಮಾರ್ಗಗಳನ್ನು ಹುಡುಕುವುದಾಗಿ ಕಾಂಗ್ರೆಸ್ ನಾಯಕಿ  ಪ್ರಿಯಾಂಕಾ ಗಾಂಧಿ ಭರವಸೆ ನೀಡಿದರು.

ಸುಲ್ತಾನ್ ಬತ್ತೇರಿಯಲ್ಲಿ ನಡೆದ ಕಾರ್ನರ್ ಸಭೆಯಲ್ಲಿ ಮಾತನಾಡಿದ ಅವರು, ಈ ನಿಷೇಧದಿಂದ ಜನಜೀವನ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉಂಟಾಗುತ್ತಿರುವ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯಗಳ ನಡುವಿನ ಸಮನ್ವಯದ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಅರಣ್ಯ ಸಂರಕ್ಷಣೆ ಮತ್ತು ಸಾರ್ವಜನಿಕ ಅಗತ್ಯಗಳ ನಡುವೆ ಸಮತೋಲನ ಸಾಧಿಸುವ ಅಗತ್ಯವಿದ್ದು, ಸ್ಥಳೀಯರ ಸಮಸ್ಯೆಗಳನ್ನು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಪ್ರಸ್ತಾಪಿಸಲಾಗುವುದು ಎಂದು ಅವರು ಹೇಳಿದರು.

ರಾತ್ರಿ ಸಂಚಾರ ನಿಷೇಧ ತೆರವು ವಿಚಾರವು ದೀರ್ಘಕಾಲದಿಂದ ಜನರ ಬೇಡಿಕೆಯಾಗಿದ್ದು, ಇದೀಗ ಇದಕ್ಕೆ ರಾಜಕೀಯ ವೇದಿಕೆಯಲ್ಲಿ ಮತ್ತೆ ಚರ್ಚೆ ಜೋರಾಗಿದೆ.

Key words: Wayanad, kerala, Karnataka, night travel, Priyanka Gandhi