ಚನ್ನಪಟ್ಟಣ ಕ್ಷೇತ್ರಕ್ಕೆ ಚುನಾವಣಾ ಜ್ವರ ಕ್ರಿಯೇಟ್ ಮಾಢುವುದು ಬೇಡ-ಹೆಚ್ ಡಿಕೆಗೆ ಯೋಗೇಶ್ವರ್ ಟಾಂಗ್

ರಾಮನಗರ,ಏಪ್ರಿಲ್,15,2026(www.justkannada.in): ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಮತ್ತೆ ಕೇಂದ್ರ ಸಚಿವ ಹೆಚ್ .ಡಿ ಕುಮಾರಸ್ವಾಮಿ ಸ್ಪರ್ಧಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಸಿ.ಪಿ ಯೋಗೇಶ್ವರ್ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಸಿ.ಪಿ ಯೋಗೇಶ್ವರ್, ಚನ್ನಪಟ್ಟಣ ಕ್ಷೇತ್ರಕ್ಕೆ ಚುನಾವಣಾ ಜ್ವರ ಕ್ರಿಯೇಟ್ ಮಾಡುವುದು ಬೇಡ. ಪ್ರತಿವರ್ಷವೂ ಚುನಾವಣೆ ಜ್ವರ ಕ್ರಿಯೆಟ್ ಮಾಡುವುದು ಬೇಡ ಕುಮಾರಸ್ವಾಮಿ ಎರಡು ಬಾರಿ ಸ್ಪರ್ಧೆ ಮಾಡಿದರು, ಶಾಸಕರಾದರು. ಅವಕಾಶ ಬಂದರೆ ಸ್ಪರ್ಧಿಸಬಹುದು ಯಾರುಬೇಕಾದರೂ ಸ್ಪರ್ಧಿಸಲಿ ನೋಡೋಣ. ವಿಧಾನಸೌಧ ಚುನಾವಣೆಗೆ ಇನ್ನೂ ಸಮಯವಿದೆ ಎಂದರು.

ಚನ್ನಪಟ್ಟಣ ಮುಂದೆ ಮಹಿಳಾ ಮೀಸಲು ಕ್ಷೇತ್ರ ಎಂಬ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಿಪಿ ಯೋಗೇಶ್ವರ್ ಮಹಿಳಾ ಕ್ಷೇತ್ರ ಆದರೂ ಸಮಾನವಾಗಿ ಅವಕಾಶ ಕೊಡೋಣ.  ಸಾಕು ನಮಗೂ ರಾಜಕೀಯ ಎಂದರು.

ನಾನು ಸಚಿವಾಕಾಂಕ್ಷಿ ಅಲ್ಲ. ಹೀಗಾಗಿ ನನಗೆ ಮಂತ್ರಿಸ್ಥಾನ ಬೇಡ ಎಂದು ಸಿಪಿ ಯೋಗೇಶ್ವರ್ ತಿಳಿಸಿದರು.

Key words: election fever, Channapatna constituency, CP Yogeshwar, HDK