ಕಾಂಗ್ರೆಸ್ ಎರಡು ಸ್ಟೇರಿಂಗ್ ಇರುವ ಬಸ್: ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ- ಸಚಿವ ಸುಧಾಕರ್ ಟಾಂಗ್.

ಹುಬ್ಬಳ್ಳಿ,ಡಿಸೆಂಬರ್,14,2022(www.justkannada.in):  ಬಿಜೆಪಿ ಮನೆಯೊಂದು ನೂರು ಬಾಗಿಲಾಗಿದೆ. ಬಿಎಸ್ ವೈ ಅವರನ್ನ ಕಡೆಗಣಿಸಿದ್ದಾರೆ ಎಂದು ಲೇವಡಿ ಮಾಡಿದ್ದ ಕಾಂಗ್ರೆಸ್ ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿರುಗೇಟು ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಸಚಿವ ಸುಧಾಕರ್, ಬಿಜೆಪಿಯಲ್ಲಿರುವುದು ಒಂದೇ ಮನೆ. ಬಿಜೆಪಿಯಲ್ಲಿ ಯಾವುದೇ ಬಿನ್ನಾಭಿಪ್ರಾಯವೇ ಇಲ್ಲ. ಕಾಂಗ್ರೆಸ್  ಎರಡು ಸ್ಟೇರಿಂಗ್ ಇರೋ ಬಸ್.   ಕಾಂಗ್ರೆಸ್ ಗೆ ಬಿಜೆಪಿ ಬಗ್ಗೆ  ಮಾತಾಡುವ ನೈತಿಕತೆ ಇಲ್ಲ. ಬೊಮ್ಮಾಯಿ ಹಾಲು ಜೇನಿನಂತೆ ಕೆಲಸ ಮಾಡುತ್ತಿದ್ದಾರೆ. ಇದನ್ನ ಕಾಂಗ್ರೆಸ್ ಗೆ ಸಹಿಸಲು ಆಗುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿರುವುದು ಅವರಿಗೆ ಸಂತೋಷವಿಲ್ಲ ಎಂದು ಟಾಂಗ್ ನೀಡಿದರು.minister-k-sudhakar-rajyasabha-election-hd-devegowda-mallikarjuna-khrage

ಬಿಎಸ್ ವೈ ಪ್ರಶ್ನಾತೀತ ನಾಯಕ.  ಬಿಎಸ್ ವೈ ಅವರಿಗೆ ಪಕ್ಷದಲ್ಲಿ ಉನ್ನತ ಸ್ಥಾನಮಾನ ನೀಡಲಾಗಿದೆ. ಬಿಎಸ್ ವೈ ಅವರು ಬಿಜೆಪಿಯ ಸಂಸದೀಯ ಮಂಡಳಿ ಸದಸ್ಯರಾಗಿದ್ದಾರೆ.  ಗುಜರಾತ್ ಸಿಎಂ ಆಯ್ಕೆ ವೇಳೆ ಯಡಿಯೂರಪ್ಪ ಅವರ ಸಲಹೆ ಪಡೆದರು ಎಂದು ಸಚಿವ ಸುಧಾಕರ್ ಹೇಳಿದರು.

Key words: Congress – two- bus: – not- moral – talk –about- BJP-Minister- Sudhakar