Sunday, August 9, 2026

BDA Apartments

Home Front Page ತಿಹಾರ್ ಜೈಲಿಗೆ ‘ಕೈ’ ನಾಯಕ ಅಹ್ಮದ್ ಪಟೇಲ್ ಭೇಟಿ: ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್...

ತಿಹಾರ್ ಜೈಲಿಗೆ ‘ಕೈ’ ನಾಯಕ ಅಹ್ಮದ್ ಪಟೇಲ್ ಭೇಟಿ: ಇಂದು ಮಾಜಿ ಸಚಿವ ಡಿ.ಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ….

ನವದೆಹಲಿ,ಸೆ,26,2019(www.justkananda.in): ‌ಇಡಿ ವಿಶೇಷ ನ್ಯಾಯಾಲಯ ಜಾಮೀನು ನೀಡಲು ತಿರಸ್ಕರಿಸಿದ್ದನ್ನು ಪ್ರಶ್ನಿಸಿ  ಮಾಜಿ ಸಚಿವ ಡಿ.ಕೆ ಶಿವಕುಮಾರ್ ದೆಹಲಿ ಹೈಕೋರ್ಟ್ ಮೊರೆಹೋಗಿದ್ದು ಇಂದೇ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.

ಅಕ್ರಮ ಹಣ ವರ್ಗಾವಣೆ ಆರೋದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರ ಜಾಮೀನು ಅರ್ಜಿಯನ್ನು ನಿನ್ನೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಡಿ.ಕೆ ಶಿವಕುಮಾರ್ ದೆಹಲಿ  ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ತಿಹಾರ್ ಜೈಲಿನಲ್ಲಿರುವ ಡಿ.ಕೆ ಶಿವಕುಮಾರ್ ಭೇಟಿ ಮಾಡಿದ ಕೈ ನಾಯಕ ಅಹ್ಮದ್ ಪಟೇಲ್….

ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಇಂದು  ತಿಹಾರ್ ಜೈಲಿನಲ್ಲಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನ ಭೇಟಿಯಾಗಿ ಕ್ಷೇಮ ವಿಚಾರಿಸಿದರು.  ಕಾಂಗ್ರೆಸ್ ‌ಮುಖಂಡರಾದ ಮಾಜಿ ಸಚಿವ ಆನಂದಶರ್ಮಾ ಸಹ ಅಹ್ಮದ್ ಪಟೇಲ್ ಗೆ ಸಾಥ್ ನೀಡಿದರು. ಈ ವೇಳೆ ಸಂಸದ ಡಿ.ಕೆ.ಸುರೇಶ್ ಕೂಡಾ  ಉಪಸ್ಥಿತರಿದ್ದರು.

Key words: Congress leader- Ahmed Patel -visits -Tihar jail-Former minister- D K shivakumar-bail application