ನಾನು ಗುತ್ತಿಗೆದಾರರ ಬಳಿ  ಕಮಿಷನ್ ಕೇಳಿದ್ದರೇ ಇಂದೇ ರಾಜಕೀಯ ನಿವೃತ್ತಿ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಆಗಸ್ಟ್,11,2023(www.justkannada.in):  ನಾನು ಗುತ್ತಿಗೆದಾರರ ಬಳಿ 10%-15% ಕಮಿಷನ್ ಕೇಳಿದ್ದರೇ ಇಂದೇ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ತಮ್ಮ ವಿರುದ್ದ ಕಮಿಷನ್ ಆರೋಪ ಹಿನ್ನೆಲೆ ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾಕೆ ಬಿಲ್ ಕೊಟ್ಟಿಲ್ಲ ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾಕಿ ಬಿಲ್ ತಡೆ ಹಿಡಿದಿದ್ದರು.  ಗುತ್ತಿಗೆದಾರರ ದೂರಿನ ಹಿಂದೆ ಯಾರಿದ್ದಾರೆ ಅಂತಾ ಗೊತ್ತು. ಯಾರಿಗೆಲ್ಲ ದೂರು ನೀಡಿದ್ದಾರೋ ನೀಡಲಿ ಎಂದರು.

ನಾನು ಗುತ್ತಿಗೆದಾರರ ಬಳಿ ಕಮಿಷನ್ ಕೇಳಿದ್ರೆ ರಾಜಕಾರಣದಿಂದ ನಿವೃತ್ತಿ ಘೋಷಿಸುತ್ತೇನೆ.   ನನ್ನ ಮೇಲೆ ಆರೋಪ ಸಾಬೀತಾದ್ರೆ ರಾಜಕೀಯ ನಿವೃತ್ತಿಯಾಗುತ್ತೇನೆ ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: commission – contractor- today – retired –politics- DCM -DK Shivakumar.