ಹೆಚ್.ವಿಶ್ವನಾಥ್ ಬ್ಲೂ ಬಾಯ್: ಚಾಮುಂಡಿ ಬೆಟ್ಟಕ್ಕೆ ಬನ್ನಿ ಪ್ರಮಾಣ ಮಾಡಿ ಎಂದು ಸವಾಲು ಹಾಕಿ ಸಿಡಿ ಬಹಿರಂಗಪಡಿಸಿದ ಮಾಜಿ ಸಚಿವ. ಸಾ.ರಾ ಮಹೇಶ್…

ಮೈಸೂರು,ಸೆ,23,2019(www.justkannada.in): ನಾನು  ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ ಎಂದು ಚಾಮುಂಡೇಶ್ವರಿ ಮುಂದೆ ನಿಜ ಹೇಳಿ ಬನ್ನಿ ಎಂದು ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಗೆ ಮಾಜಿ ಸಚಿವ ಸಾ.ರಾ ಮಹೇಶ್ ಸವಾಲು ಹಾಕಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಸಾ.ರಾ ಮಹೇಶ್,  ವಿಶ್ವನಾಥ್ ಅನರ್ಹ ಆದಮೇಲೆ ಹೆಚ್.ವಿಶ್ವನಾಥ್ ಹೋಗಿ ಹುಚ್.ವಿಶ್ವನಾಥ್ ಆಗಿದ್ದಾರೆ. ಈಗ ಬಾಗಿಲು ತಟ್ಟುತ್ತಿರುವ ಪಕ್ಷ ಆಸ್ಪತ್ರೆಗೆ ತೋರಿಸಲಿ. ನೀವು ಬ್ಲೂ ಬಾಯ್, ನನ್ನ ಬಗ್ಗೆ ಮಾತನಾಡುತ್ತೀರಿ. ನೀವು ಕಾನೂನಿಗೆ ಎದರುತ್ತಿಲ್ಲ, ಹಾಗಾಗಿ ದೇವರ ಮುಂದೆ ಕರೆಯುತ್ತಿದ್ದೇನೆ. ನೀವು ಯಾರಿಗೂ ಲಾಯಲ್ ಆಗಿ ಇಲ್ಲ ಎಂದು ವಾಗ್ದಾಳಿ  ನಡೆಸಿದರು.

ಹಾಗಯೇ ಹೆಚ್.ವಿಶ್ವನಾಥ್ ಸಂಬಂಧ ಸಿಡಿ ಬಹಿರಂಗ ಪಡಿಸಿದ ಸಾ.ರಾ ಮಹೇಶ್, ಎರಡು ತಿಂಗಳ‌ ಹಿಂದೆ ಬಂದ ಆಡಿಯೋ ಯಾವ ಹೀರೋಹಿನ್ ಜೊತೆಗಿನ ಸಂಭಾಷಣೆ ಅನ್ನೋದು ಗೊತ್ತಿದೆ. ಅವರ ನಂಬರ್ ಕೂಡ ನನ್ನ ಬಳಿ ಇದೆ. ಇದರ ಬಗ್ಗೆ ತನಿಖೆ ಮಾಡಿಸಿ. ನಿಮ್ಮ ಬ್ಲೂ ಫಿಲಂ ವೀಡಿಯೋ ಇಲ್ಲಿದೆ ನೋಡಿ. ಎರಡು ತಿಂಗಳಾದ್ರೂ ಯಾಕೆ ಮಾತನಾಡುತ್ತಿಲ್ಲ. ನೀವು ಬ್ಲೂ ಬಾಯ್. ಬ್ಲೂ ಫೀಲ್ಮಂ ಹೀರೋ ನೀವು, ಹೀರೋಹಿನ್ ಯಾರು ಅಂತ ನಾನು ಹೇಳುತ್ತೇನೆ.  ನಿಮ್ಮಂತ ಜೀವನ ಮಾಡುವ ಬದಲು ನಾ‌ನು ಹೊಳೆಗೆ ಹಾರಿಕೊಳ್ಳುತ್ತಿದ್ದಾದ್ದೆ ಎಂದು ಲೇವಡಿ ಮಾಡಿದರು.

ಶಾಸಕ ರಾಮದಾಸ್ ರ ಚಡ್ಡಿ ತೊಳಿತಿದ್ದ ಎನ್ನುವ ವಿಶ್ವನಾಥ್ ಹೇಳಿಕೆಗೆ ತಿರುಗೇಟು ನೀಡಿದ ಸಾ. ರಾ  ಮಹೇಶ್,  ನನ್ನ ಬಳಿ ವ್ಯವಹಾರ ಇದ್ದು, ಕಾನೂನು ಬದ್ಧವಾಗಿ ನಡೆದುಕೊಳ್ಳುತ್ತಿದ್ದೇನೆ. ಇವರ ಬಗ್ಗೆ ಮಾತನಾಡಿ ನನ್ನ ಬಾಯಿ ಹೊಲಸಾಗಿದೆ. ಚಡ್ಡಿ ಹೊಗದರೆ ಪರವಾಗಿಲ್ಲ, ಅದನ್ನ ಕಂಡ ಕಡೆ ಬಿಚ್ಚದಿದ್ದರೆ ಸಾಕು. ನನ್ನ ಯೋಗ್ಯತೆ ಗೊತ್ತಿದ್ದೇ ಹೆಣ್ಣು ಮಕ್ಕಳು ಆರತಿ ಮಾಡಿ ಒಳಗೆ ಕರೆದುಕೊಳ್ಳುತ್ತಿದ್ದಾರೆ. ನಿಮ್ಮಂತೆ ಗೋಣೀಚೀಲಾದಲ್ಲಿ ಕೂರಿಸುತ್ತಿರಲಿಲ್ಲ. ನಿಮ್ಮ ಯೋಗ್ಯತೆ ಮೈಸೂರು ಮಡಿಕೇರಿ ಜನರಿಗೆ ಗೊತ್ತಿದೆ ಎಂದು ಕಿಡಿಕಾರಿದರು.

ಹೆಚ್.ವಿಶ್ವನಾಥ್ ಅತೃಪ್ತ ಪ್ರೇತಾತ್ಮ. ಬಾಯಿ ಬಿಟ್ರೆ ಸುಳ್ಳು ಹೇಳ್ತಿರಿ. ಚಾಮುಂಡೇಶ್ವರಿ ಹಬ್ಬ ಶುರುವಾಗಿದೆ. ನಾನು  ಯಾವುದೇ ಆಮಿಷಗಳಿಗೆ ಒಳಗಾಗಿಲ್ಲ ಎಂದು ಚಾಮುಂಡೇಶ್ವರಿ ಮುಂದೆ ನಿಜ ಹೇಳಿ ಬನ್ನಿ ಎಂದು ಸವಾಲು ಹಾಕಿದ  ಸಾ. ರಾ  ಮಹೇಶ್ , ಕಾನೂನು ಬಾಹಿರ ಕೆಲಸ ಮಾಡಲಿಲ್ಲ ಹೀಗಾಗಿ ನಾನು ಕೆಟ್ಟವನ.? ನನಗೂ ಗೊತ್ತು ನಿಮ್ಮ ತಂದೆ ಹತ್ತಿರ  ಜಾಗ ಅಸ್ತಿ ಇತ್ತು ಅಂತ,  ನಮ್ಮ ತಂದೆ ಉಪನ್ಯಾಸಕ ಆಗಿದ್ದವರು  ನಿಮಗಿಂತ ಹೆಚ್ಚಿನ ಸಂಸ್ಕಾರ ಉಳ್ಳವನು. ನನಗೇನು ನಿಮ್ಮ ಹಾಗೆ ಏಕವಚನದಲ್ಲಿ ಮಾತನಾಡಲು ಬರೋದಿಲ್ವೆ. ಧೈರ್ಯ ಇದ್ದರೆ ಬನ್ನಿ ಚಾಮುಂಡಿ ಸನ್ನಿಧಿಗೆ.. ನೀವು ಕೆ.ಆರ್ ನಗರಕ್ಕೆ l994ರಲ್ಲಿ ಹೋದಾಗ ಜನ ಯಾಕೆ ಬಾಗಿಲು ಮುಚ್ಚಿಕೊಳ್ತಿದ್ರು ಎಂದು ಹೇಳ್ತಿನಿ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಬನ್ನಿ ಎಂದು ಗುಡುಗಿದರು.

ಹಳ್ಳಿ ಹಕ್ಕಿ ಅಂತ ಹೆಸರು ಇಟ್ಟಿದ್ದರಿಂದಲೇ ಒಂದೊಂದು ಕಾಲಕ್ಕೆ ಒಂದೊಂದು ಗೂಡು. ಪಕ್ಷದ ಅಧ್ಯಕ್ಷನಾಗಿ ನಮ್ಮಗಳ ತಲೆ ಕಾಯಬೇಕಿತ್ತು. ಆದರೆ ನಿಮ್ಮ ಜೊತೆ ಇಬ್ಬರು ಶಾಸಕರನ್ನು ಬಾಂಬೆ ಕರೆದುಕೊಂಡು ಹೋಗಿ ತಲೆ ಹಿಡಿದಿದ್ದೀರಿ. ಈಗ ಹೇಳಿ ಅಯೋಗ್ಯ ನೀವಾ ಅಥವಾ ನಾನ.
ಸಾರಾ.ಮಹೇಶ್ ರಿಂದ ದೇವೇಗೌಡರ ಕುಟುಂಬ ಹಾಳಾಯಿತಿ ಎಂಬ ಹೇಳಿಕೆ ವಿಚಾರ. ವಿಶ್ವನಾಥ್ ಹೇಳಿಕೆ ಸತ್ಯ. ನಿಮ್ಮಂತ ಕಾರ್ಕೋಟಕ ವಿಷ ಜಂತುವನ್ನು ಕರೆತಂದೇ ನಾನು ಅವರಿಗೆ ವಿಷ ಹಾಕಿದೆ. ಹುಣಸೂರಲ್ಲೇ ನಮ್ಮ ಶಾಸಕನೇ ಗೆಲ್ಲುತಿದ್ದರು. ದೇವೇಗೌಡರು ಎಂಪಿ ಆಗುತ್ತಿದ್ದರು.ಹೀಗಾಗಿ ನೀವು ಹೇಳುತ್ತಿರುವುದು ಸತ್ಯ ಎಂದು ಕಿಡಿಕಾರಿದರು.

Key words: Come – Chamundi Hill –swear- Challenge-former minister sa.ra Mahesh-h.vishwanath