ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ  ನಾವೇ ಗೆಲ್ಲುತ್ತೇವೆ- ಸಿಎಂ ಸಿದ್ದರಾಮಯ್ಯ

ಬೆಂಗಳೂರು,ಮಾರ್ಚ್,27,2026 (www.justkannada.in): ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಬಂಡಾಯವೆದ್ದಿದ್ದ ಸಾಧಿಕ್ ಪೈಲ್ವಾನ್ ಅವರ ಮನವೊಲಿಕೆ ಮಾಡಿದ್ದೇವೆ. ಎರಡು ಕ್ಷೇತ್ರಗಳ ಉಪಚುನಾವಣೆಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ  ವ್ಯಕ್ತಪಡಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,  ಸಾದಿಕ್ ಪೈಲ್ವನ್   ದಾವಣಗೆರೆ ದಕ್ಷಿಣ  ಉಪಚುನಾವಣೆಗೆ  ಟಿಕೆಟ್ ಕೇಳಿದ್ದರು.  ಟಿಕೆಟ್ ಸಿಗದಿದ್ದರಿಂದ ನಾಮಪತ್ರ ಸಲ್ಲಿಸಿದ್ದರು.  ನಿನ್ನೆ ನಮಗೆ ಸಮಯ ಬಹಳ ಕಡಿಮೆ ಇದ್ದುದ್ದರಿಂದ ಮಾತನಾಡಿರಲಿಲ್ಲ. ಇದೀಗ ಸಾದಿಕ್ ಮನವೊಲಿಸಿದ್ದೇವೆ ಎಂದರು.

ದಾವಣಗೆರೆ ದಕ್ಷಿಣದಲ್ಲಿ 70 ಸಾವಿರಕ್ಕೂ ಹೆಚ್ಚು ಮುಸ್ಲೀಮರಿದ್ದಾರೆ. ಹೀಗಾಗಿ  ಟಿಕೆಟ್ ಬಯಸಿದ್ದರು.  ಆದರೆ ಶಾಸಕರು ನಿಧನರಾದರೆ ಅವರ ಕುಟುಂಬ ಸದಸ್ಯರಿಗೆ ಟಿಕೆಟ್ ಕೊಡುವ ಪದ್ದತಿ ಕಾಂಗ್ರೆಸ್ ನಲ್ಲಿದೆ ಸಾದಿಕ್ ಪೈಲ್ವಾನ್ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದರು ನಾನು ಸಾದಿಕ್ ಪೈಲ್ವಾನ್ ಕುಸ್ತಿ ನೋಡಲು ಹೋಗುತ್ತಿದ್ದೆ. ಉಪಚುನಾವಣೆಗೆ ಅಭ್ಯರ್ಥಿಯಾಗಬೇಕೆಂದು ಬಯಸಿದ್ದು ತಪ್ಪಲ್ಲ.  ಇದೀಗ ಚುನಾವಣಾ ಕಣದಿಂದ ಸಾದಿಕ್ ನಿವೃತ್ತರಾಗಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇವೆ.  ಎರಡು ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Key words: By-election, We, win, both constituencies, CM Siddaramaiah