ಚುಂಚನಕಟ್ಟೆ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿ ಕೊರೋನಾಗೆ ಬಲಿ…

ಮೈಸೂರು,ಮೇ,13,2021(www.justkannada.in): ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲ್ಲೂಕಿನ ಚುಂಚನಕಟ್ಟೆಯ ಆದಿಚುಂಚನಗಿರಿ ಶಾಖಾ ಮಠದ ಶಿವಾನಂದ ಸ್ವಾಮೀಜಿ(62) ಕೊರೋನಾಗೆ ಬಲಿಯಾಗಿದ್ದಾರೆ.jk

ಶಿವಾನಂದ ಸ್ವಾಮೀಜಿ ಅವರು ಎರಡು ದಿನದ ಹಿಂದೆ ಮಂಡ್ಯ ಜಿಲ್ಲೆಯ ನಾಗಮಂಗಲದ ಬೆಳ್ಳೂರು ಕ್ರಾಸ್ ಆಸ್ವತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಶಿವಾನಂದ ಸ್ವಾಮೀಜಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. chunchanakatte-adichunchanagiri-math-swamiji-death-corona

ಕಳೆದ 25 ವರ್ಷಗಳಿಂದ ಚುಂಚನಕಟ್ಟೆಯ ಆದಿಚುಂಚನಗಿರಿ ಶಾಖಾ ಮಠದಲ್ಲಿ ಸ್ವಾಮೀಜಿಯಾಗಿ ಕೆಲಸ ನಿರ್ವಹಣೆ ಮಾಡಿದ್ದರು. ಆದಿ ಚುಂಚನಗಿರಿ ಚುಂಚನಕಟ್ಟೆ ಶಾಖಾ ಮಠದಲ್ಲಿ ಅನಾಥಾಶ್ರಮದ ಅಭಿವೃದ್ದಿ. ವಿದ್ಯಾರ್ಥಿಗಳ ವಸತಿ ನಿಲಯ , ಬಿ ಜಿ ಎಸ್ ಸಂಸ್ಥೆ 1 ರಿಂದ 12 ತರಗತಿವರೆಗೆ  , ಆದಿಚುಂಚನಗಿರಿ ಸಮುದಾಯ ಭವನ,  ನಿರ್ಮಿಸಿ ಮಠದ ಏಳ್ಗೆಗಾಗಿ ಸಾಕಷ್ಟು ಅವಿರತ ಶ್ರಮವಹಿಸಿದ್ದರು.

Key words: Chunchanakatte -Adichunchanagiri –math- Swamiji –death- Corona