ಸಚಿವ ಸಂಪುಟ ವಿಸ್ತರಣೆ: ಬೇಸರಗೊಂಡು ಮಾರ್ಮಿಕ ಉತ್ತರ ನೀಡಿದ ಬಿಎಸ್ವೈ

ಬೆಂಗಳೂರು, ನವೆಂಬರ್ 29, 2020 (www.justkannada.in): ಸಂಪುಟ ವಿಸ್ತರಣೆಗೆ ನಾವು ನೀವು ಇಬ್ಬರೂ ಕಾಯಬೇಕು ಎಂದು ಮಾರ್ಮಿಕವಾಗಿ ಮಾತನಾಡಿದ್ದಾರೆ ಸಿಎಂ ಯಡಿಯೂರಪ್ಪ ಅವರು.

ಚಿತ್ರದುರ್ಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸಿಎಂ ಯಡಿಯೂರಪ್ಪ ಅವರು ಅಧೀಕೃತ ನಿವಾಸ ಕಾವೇರಿಯಿಂದ ಚಿತ್ರದುರ್ಗಕ್ಕೆ ತೆರಳಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

ಸಂಪುಟ ವಿಸ್ತರಣೆಗೆ ನಾವು ನೀವು ಇಬ್ಬರೂ ಕಾಯಬೇಕು ಎಂದು ಮಾಧ್ಯಮಗಳಿಗೆ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸಿಎಂ ಮಾತು ಕುತೂಹಲ ಮೂಡಿಸಿದೆ. ಹೈಕಮಾಂಡ್ ಸಂಪುಟ ವಿಸ್ತರಣೆ ಕುರಿತು ಒಪ್ಪಿಗೆ ಕೊಡದಿರುವುದು ಅವರ ಮೇಲಿನ ಒತ್ತಡವನ್ನು ಪರೋಕ್ಷವಾಗಿ ತೋರಿಸಿದೆ.