Saturday, August 22, 2026

BDA Apartments

Home Front Page ಇಡಿಯಿಂದ ಮುಡಾದ ಆಸ್ತಿ ಜಪ್ತಿ: ಈಗಲಾದ್ರೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ- ಬಿವೈ ವಿಜಯೇಂದ್ರ

ಇಡಿಯಿಂದ ಮುಡಾದ ಆಸ್ತಿ ಜಪ್ತಿ: ಈಗಲಾದ್ರೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ- ಬಿವೈ ವಿಜಯೇಂದ್ರ

ಬೆಂಗಳೂರು,ಜನವರಿ,18,2025 (www.justkannada.in): ಇಡಿಯವರು ಮುಡಾಗೆ ಸೇರಿದ 300 ಕೋಟಿ ಆಸ್ತಿ ಜಪ್ತಿ ಮಾಡಿದ್ದಾರೆ ಈಗಲಾದರೂ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆಗ್ರಹಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ,  ಈಗಾಗಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕಿತ್ತು.  ಸಿಎಂ ಸಿದ್ದರಾಮಯ್ಯ ಭಂಡತನ ಬಿಡಬೇಕು.  ಮುಡಾ ಹಗರಣ ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು.

10 ವರ್ಷಗಳ ಹಿಂದೆಯೇ ಜಾತಿ ಜನಗಣತಿ ವರದಿ ಅವರ ಕೈಸೇರಿತ್ತು. ಅವತ್ತೆ ಯಾಕೆ ಜಾರಿಗೆ ಮಾಡಲಿಲ್ಲ. 10 ವರ್ಷದ ಬಳಿಕ ಜಾತಿ ಗಣತಿ ವರದಿ ಜಾರಿಗೆ ಮುಂದಾಗಿದ್ದಾರೆ. ಇದು ರಾಜಕೀಯ ಚದುರಂಗದ ಆಟ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ಹೊರಟಿದ್ದಾರೆ ಎಂದು ಕಿಡಿಕಾರಿದರು.

Key words: ED, Muda, CM Siddaramaiah, resign, BY Vijayendra