Wednesday, August 12, 2026

BDA Apartments

Home Front Page ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕಾಂಗ್ರೆಸ್ ನವರೇ ವಿಷಬೀಜ ಬಿತ್ತುತ್ತಿದ್ದಾರೆ- ಬಿವೈ ವಿಜಯೇಂದ್ರ

ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕಾಂಗ್ರೆಸ್ ನವರೇ ವಿಷಬೀಜ ಬಿತ್ತುತ್ತಿದ್ದಾರೆ- ಬಿವೈ ವಿಜಯೇಂದ್ರ

ಬೆಂಗಳೂರು,ಮಾರ್ಚ್,17,2025 (www.justkannada.in): ಬಿವೈ ವಿಜಯೇಂದ್ರ ನಾಡಗೀತೆ ಓದಲಿ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ  ಕಾಂಗ್ರೆಸ್ ನವರೇ ವಿಷಬೀಜ ಬಿತ್ತುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕಾಂಗ್ರೆಸ್ ನವರೇ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಕೆಲಸದ ವಿರುದ್ದ ನಮ್ಮ ಹೋರಾಟವಿರಲಿದೆ  ಎಂದರು.

ಮುಸ್ಲೀಮರನ್ನ ಎಂಎಲ್ ಸಿ, ಎಂಪಿ ಮಾಡಿ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ  ಬಿವೈ ವಿಜಯೇಂದ್ರ,  ಎಪಿಜೆ ಅಬ್ದುಲ್ ಕಲಾಂರನ್ನ ರಾಷ್ಟ್ರಪತಿ ಮಾಡಿದ್ದವು.  ಅಬ್ದುಲ್ ನಜೀರ್ ರನ್ನು ರಾಜ್ಯಪಾಲರನ್ನಾಗಿ ನೇಮಕ ಮಾಡಿದ್ದೇವೆ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರಿಗೆ ಭಾರತ ರತ್ನ ಕೊಟ್ಟಿದ್ದು ಯಾರು ಎಂದು ಪ್ರಶ್ನಿಸಿದರು.

Key words: Congress,  sowing,  poisonous seeds,  BY Vijayendra