ಕಮಿಷನ್ ಗಾಗಿ ಛತ್ತೀಸ್ ಗಢದಿಂದ ಅಕ್ಕಿ ಖರೀದಿ- ಎಂಎಲ್ ಸಿ ರವಿಕುಮಾರ್ ಆರೋಪ.

ಬೆಂಗಳೂರು,ಜೂನ್,17,2023(www.justkannada.in):  ಅನ್ನಭಾಗ್ಯ ಯೋಜನೆ ಜಾರಿಗಾಗಿ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿದ ಹಿನ್ನೆಲೆ  ಬೇರೆ ರಾಜ್ಯಗಳಿಂದ ಅಕ್ಕಿ ಖರೀದಿಸಲು ಮುಂದಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ  ವಿಧಾನಪರಿಷತ್ ಬಿಜೆಪಿ ಸದಸ್ಯ ರವಿ ಕುಮಾರ್ ಕಮಿಷನ್ ಆರೋಪ ಮಾಡಿದ್ದಾರೆ.

ಈ ಕುರಿತು ಮಾತನಾಡಿರುವ ಎಂಎಲ್ ಸಿ ರವಿಕುಮಾರ್, ಈಗಾಗಲೇ ಕೇಂದ್ರ ಸರ್ಕಾರ ದೇಶಾದ್ಯಂತ ಬಡವರಿಗೆ ಅಕ್ಕಿ ಕೊಡುತ್ತಿದೆ. ಹೆಚ್ಚುವರಿ ಅಕ್ಕಿ ಕೊಡುವುದಕ್ಕೆ  ಕಾಂಗ್ರೆಸ್ ಜವಾಬ್ದಾರಿ. ಕೇಂದ್ರ ಸರ್ಕಾರದ ಬಳಿ ಅಕ್ಕಿ ಇಲ್ಲ. ಕೇಂದ್ರದ ಬಳಿ ಅಕ್ಕಿ ಇದ್ದರೇ ತಾನೇ ಪೂರೈಕೆ ಮಾಡೋದು . ಆದರೆ ಕಮಿಷನ್ ಗಾಗಿ ಛತ್ತೀಸ್ ಗಢದಿಂದ ಅಕ್ಕಿ ಖರೀದಿ ಮಾಡಲು  ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.  ತಮ್ಮ ಜೇಬಿಗೆ ಹಣ ಹಾಕಿಕೊಳ್ಳುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಹೆಚ್ಚುವರಿ ಅಕ್ಕಿ ಇಲ್ಲದಿರುವುದಕ್ಕೆ ಕೇಂದ್ರ ಸರ್ಕಾರ ನಿರಾಕರಿಸಿದೆ. ಆದರೆ ಕೇಂದ್ರ ಸರ್ಕಾರದ ವಿರುದ್ಧ  ಕಾಂಗ್ರೆಸ್ ಧರಣಿ ಜನವಿರೋಧಿ ನಿರ್ಧಾರ  ಎಂದು ಟೀಕಿಸಿದರು.

Key words: Buying -rice – Chhattisgarh – commission- MLC- Ravikumar