ಬಿಜೆಪಿಯ ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ- ಮಾಜಿ ಸಿಎಂ ಸಿದ್ಧರಾಮಯ್ಯ.

ಬೆಂಗಳೂರು,ಜನವರಿ,10,2023(www.justkannada.in): ಸಿದ್ಧು ನಿಜಕನಸುಗಳು ಪುಸ್ತಕ ಬಿಡುಗಡೆಗೆ ಮುಂದಾಗಿದ್ಧ ಬಿಜೆಪಿಗೆ ಕಾಂಗ್ರೆಸ್ ಕೌಂಟರ್ ನೀಡಿದ್ದು ಬಿಜೆಪಿಯ ಪಾಪದ ಪುರಾಣ ಬಿಡುಗಡೆ ಮಾಡಿದ್ದೇವೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿ ಪಾಪಾದ ಪುರಾಣ ಬಯಲು ಮಾಡಿದ್ದೇವೆ. ಈ ಸರ್ಕಾರ ಅನೈತಿಕವಾಗಿ ರಚನೆಯಾದ ಸರ್ಕಾರ. ಬಿಜೆಪಿಗೆ  ಜನಾಶೀರ್ವಾದ ಮಾಡಿರಲಿಲ್ಲ. ಅಪರೇಷನ್ ಕಮಲ ಮೂಲಕ  ಸರ್ಕಾರ ರಚನೆಯಾಯಿತು.  ಪಾಪದ ಹಣ ಖರ್ಚು ಮಾಡಿ ಬಿಜೆಪಿಯವರು  ಶಾಸಕರನ್ನ ಖರೀದಿಸಿ ಸರ್ಕಾರ ರಚಿಸಿದ್ದರು. ಅವರು ಅಧಿಕಾರಕ್ಕೆ ಬಂದ ಮೇಲೆ ಭ್ರಷ್ಟಾಚಾರ ಹೆಚ್ಚಾಗಿದೆ. ಕೊರೋನಾದಿಂದ 3 ಲಕ್ಷ ಜನ ಸಾವನ್ನಪ್ಪಿದ್ದಾರೆ. ಆದರೆ ಪರಿಹಾರ ನೀಡಲಿಲ್ಲ ಎಂದು ಕಿಡಿಕಾರಿದರು.

ನಿನ್ನೆ ಸಿದ್ಧು ನಿಜಕನಸುಗಳು ಪುಸ್ತಕ ಬಿಡುಗಡೆಗೆ ಮುಂದಾಗಿದ್ದ ಬಿಜೆಪಿ ವಿರುದ್ಧ ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಪುಸ್ತಕ ಬಿಡುಗಡೆಗೆ  ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

Key words: BJP’s -myth – sin –released-  Former CM -Siddaramaiah.