ನಾರಾಯಣಗುರುಗಳ ಸ್ತಬ್ದಚಿತ್ರ ವಿವಾದ: ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ

ಬೆಂಗಳೂರು,ಜನವರಿ,19,2022(www.justkannada.in): ನಾರಾಯಣಗುರುಗಳ ಸ್ತಬ್ದಚಿತ್ರ ವಿವಾದಕ್ಕೆ ಸಂಬಂಧಿಸಿದಂತೆ  ಬಿಜೆಪಿಗೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಟ್ವಿಟ್ ಮೂಲಕ ಟಾಂಗ್ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ಧರಾಮಯ್ಯ, ನಾರಯಾಣಗುರು, ಸುಭಾಷ್ ಚಂದ್ರ ಬೋಸ್ ಮಾತ್ರವಲ್ಲ. ಬುದ್ದ ಬಸವ ಅಂಬೇಡ್ಕರ್, ಪುಲೆ, ಕನಕ, ಕಬೀರ್ ರನ್ನು ಬಿಜೆಪಿ ದ್ವೇಷಿಸುತ್ತೆ. ಅಂತರಂಗದಲ್ಲಿ ದ್ವೇಷ, ಬಹಿರಂಗವಾಗಿ ಕೊಂಡಾಡುತ್ತೆ. ಈ ಆತ್ಮವಂಚನೆಯನ್ನ ಬಿಜೆಪಿ ಬಿಡಲಿ ಎಂದು ಕಿಡಿಕಾರಿದ್ದಾರೆ.

ಈ ಬಾರಿಯ ಗಣರಾಜ್ಯೋತ್ಸವ ಪರೇಡ್ ನಲ್ಲಿ ಸಮಾಜ ಸುಧಾಕರ ನಾರಾಯಣಗುರು ಅವರ ಸ್ತಬ್ದಚಿತ್ರ ಪ್ರದರ್ಶನಕ್ಕೆ ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ಸಾಕಷ್ಟು ಟೀಕೆ, ವಿರೋಧ ವ್ಯಕ್ತವಾಗಿದೆ.

Key words: BJP –Narayanaguru- Subhash Chandra Bose-Former CM -Siddaramaiah