ಭಾರತ್ ಜೋಡೋ ಯಾತ್ರೆಗೆ ತೊಂದರೆ ಕೊಡಲು ಬಿಜೆಪಿ ನಾಯಕರು ಸಿದ್ಧರಿದ್ದಾರೆ-ಡಿ.ಕೆ ಶಿವಕುಮಾರ್ ಕಿಡಿ.

ಬೆಂಗಳೂರು,ಸೆಪ್ಟಂಬರ್,16,2022(www.justkannada.in):   ನಾವು ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಗೆ ತೊಂದರೆ ಕೊಡಲು ಬಿಜೆಪಿ ನಾಯಕರು ಸಿದ್ಧರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಿಡಿಕಾರಿದರು.

ವಿಚಾರಣೆಗೆ ಹಾಜರಾಗುಚಂತೆ ಇಡಿಯಿಂದ ನೋಟಿಸ್ ಜಾರಿ ಹಿನ್ನೆಲೆ  ಇಂದು ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್, ನಾನು ಉದ್ಯಮಿ, ವ್ಯವಸಾಯಗಾರ ಹಾಗೆಯೇ ರಾಜಕಾರಣಿ. ನನ್ನ ಮೇಲೆ ಯಾವುದಾದರೂ ಭ್ರಷ್ಟಾಚಾರ ಇದೆಯಾ.  ನಾನು ತಪ್ಪುಮಾಡಿದ್ರೆ ನನ್ನನ್ನ ಗಲ್ಲಿಗೆ ಹಾಕಲಿ.  ಇಂದು ನೋಟಿಸ್ ಬಂದಿದೆ ಸಹಕಾರ ಕೊಡುತ್ತೇನೆ ಎಂದರು.

Key words: BJP- leaders – ready – disturb -Bharat Jodo Yatra-DK Shivakumar.