Thursday, September 17, 2026

BDA Apartments

Home Front Page ಕುಗ್ರಾಮದಲ್ಲಿ ಸ್ವತಃ ಬೋರ್ ವೆಲ್ ಪಂಪ್ ಮಾಡಿ ನೀರು ಕುಡಿದು ದಾಹ ತಣಿಸಿಕೊಂಡ ‘ಜಿಲ್ಲಾಧಿಕಾರಿ.

ಕುಗ್ರಾಮದಲ್ಲಿ ಸ್ವತಃ ಬೋರ್ ವೆಲ್ ಪಂಪ್ ಮಾಡಿ ನೀರು ಕುಡಿದು ದಾಹ ತಣಿಸಿಕೊಂಡ ‘ಜಿಲ್ಲಾಧಿಕಾರಿ.

 

ಬೀದರ್, ಜು.27, 2020 : (www.justkannada.in news) : ಯೋಜನೆಯೊಂದರ ಪ್ರಗತಿ ಪರಿಶೀಲನೆಗೆಂದು ತೆರಳಿದ್ದ ಜಿಲ್ಲಾಧಿಕಾರಿ ಹಾಗೂ ಜಿಲ್ಲೆಯ ಇತರೆ ಹಿರಿಯ ಅಧಿಕಾರಿಗಳು ಅಚಾನಕ್ಕಾಗಿ ದಾರಿಯಲ್ಲಿ ಸಿಕ್ಕ, ಬೋರ್ ವೆಲ್ ನೀರನ್ನೇ ಪಂಪ್ ಮಾಡಿ ಬಳಸಿದ ಫೋಟೋವೊಂದು ಇದೀಗ ಜಾಲತಾಣಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಬೀದರ್ ನ ಎಲೆಕ್ಟ್ರಾನಿಕ್ ಮಾಧ್ಯದವ ಹಿರಿಯ ವರದಿಗಾರ ಓಂಕಾರ್ ಮಠಮತಿ, ಈ ಘಟನೆಗೆ ಸಂಬಂಧಿಸಿದ ಫೋಟೋ ಹಾಗೂ ಮಾಹಿತಿ ಶೇರ್ ಮಾಡಿದ್ದರು. ಅವರು ನೀಡಿರುವ ಮಾಹಿತಿ ಪ್ರಕಾರ,

jk-logo-justkannada-logo

ಈ ಪೋಟೋ ನೋಡಿ ಬಹುಶಃ, ಇಂಥ ದ್ರಶ್ಯ ನೋಡೋಕ್ಕೆ ಸಿಗೋದು ಅಪರೂಪ. ಯಾವ ಪ್ರಚಾರವು ಇಲ್ಲ. ಬೀದರ್ ಜಿಲ್ಲಾಧಿಕಾರಿ ರಾಮಚಂದ್ರನ್ ಆರ್, ಬೀದರ್ ಜಿಲ್ಲಾ ಪಂಚಾಯತಿ ಸಿಇಓ ಜ್ಞಾನೇಂದ್ರಕುಮಾರ್ , ಬೀದರ್ ಎಸಿ ಶ್ರೀಧರ್ ಅವರ ಬಲು ಅಪರೂಪದ ಚಿತ್ರವಿದು.

ಗಡಿ ಜಿಲ್ಲೆ ಬೀದರ್ ನ ಔರಾದ್ ತಾಲೂಕಿನ ವಡಗಾಂ ಗ್ರಾಮದ ಬಳಿ ಹಠಾತ್ತನೆ ಭೇಟಿಗೆಂದು ತೆರಳಿದಾಗ ನಡೆದ ಘಟನೆ. ರಸ್ತೆ ಸಮೀಪದ ಕೈಪಂಪ್ ಅನ್ನು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್ ಸ್ವತಃ ಹೊಡೆದು ಕೊಡ ತುಂಬಿದರು. ಈ ವೇಳೆ ಜತೆಯಲ್ಲಿದ್ದ ಜಿಲ್ಲಾ ಪಂಚಾಯತಿ ಸಿಇಓ ಜ್ಞಾನೇಂದ್ರಕುಮಾರ್ ಹಾಗೂ ಬೀದರ್ ಎಸಿ ಶ್ರೀಧರ್ ಅವರು ಈ ಬೋರ್ ವೆಲ್ ನೀರನ್ಬ ಕುಡಿದು ದಾಹ ತೀರಿಸಿಕೊಂಡರು.

bidar-dc-bore-well-pump-dc-officers-drink-water

ಸದಾ ಏರ್ ಕಂಡಿಷನ್ಡ್ ರೂಮ್ ನಲ್ಲಿದ್ದು, ಬಾಟಲಿ ನೀರು ಕುಡಿಯುವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಚಿತ್ರದಿಂದ ಕಲಿಯುವುದು ಬಹಳಷ್ಟಿದೆ. ಗ್ರಾಮಾಂತರ ಜನರು ಕುಡಿಯುವ ನೀರನ್ನೆ ಕುಡಿದ ಈ ಮೂವರು ಅಧಿಕಾರಿಗಳು ಜನರ ಜತೆ ಸಾಮಾನ್ಯರಂತೆ ಕಂಡು ಬಂದಿದ್ದು ನಿಜಕ್ಕೂ ಹೆಮ್ಮೆ ಸಂಗತಿ.

 

oooooo

key words : bidar-dc-bore-well-pump-dc-officers-drink-water