ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎನ್ನುವುದು ನನ್ನ ನಂಬಿಕೆ- ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ.

ಹಾಸನ,ಮಾರ್ಚ್,4,2024(www.justkannada.in): ಲೋಕಸಭೆ ಚುನಾವಣೆಯ ನಂತರ ಸಿಎಂ ಬದಲಾವಣೆಯಾಗುತ್ತೆ ಎಂಬ ಚರ್ಚೆ ಹಿನ್ನೆಲೆ ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರುತ್ತಾರೆ ಎನ್ನುವುದು ನನ್ನ ನಂಬಿಕೆ ಎಂದಿದ್ದಾರೆ.

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಹಳ್ಳಿ ಮೈಸೂರಿನಲ್ಲಿ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಲೋಕಸಭೆ ಚುನಾವಣೆ ನಂತರ ಸಿಎಂ ಬದಲಾವಣೆ ವಿಚಾರ,  ಇದೆಲ್ಲಾ ಉಹಾಪೂಹ ಆ ರೀತಿ ಏನು ಇಲ್ಲ. ಸಿದ್ದರಾಮಯ್ಯ  5 ವರ್ಷ ಸಿಎಂ ಆಗರುತ್ತಾರೆ ಎನ್ನುವುದು ನನ್ನ ನಂಬಿಕೆ.  ಸಿದ್ದರಾಮಯ್ಯ ಸಂಪೂರ್ಣ ಅವಧಿಗೆ ಸಿಎಂ ಆಗಿರುತ್ತಾರೆ ಎಂದರು.

ಡಿಕೆ ಶಿವಕುಮಾರ್  ಸಿಎಂ ಆಗುತ್ತಾರೆ ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಯತೀಂದ್ರ ಸಿದ್ದರಾಮಯ್ಯ,  ಎಲ್ಲಾ ಸರ್ಕಾರ ಇದ್ದಾಗಲೂ ಕೂಡ ಆ ರೀತಿ ಇರುತ್ತೆ.  ಬಿಜೆಪಿ ಸರ್ಕಾರ   ಅವಧಿಯಲ್ಲೂ ಹಲವರು ಆಕಾಂಕ್ಷಿಗಳಿದ್ದರು.  ಒಂದು ಸ್ಥಿರ ಸರ್ಕಾರ ಕೊಡಬೇಕಿರುವುದು ಪಕ್ಷದ ಕರ್ತವ್ಯ.  ಸಿದ್ದರಾಮಯ್ಯ 5 ವರ್ಷ ಪೂರೈಸುತ್ತಾರೆ ಎನ್ನುವುದು ನನ್ನ ನಂಭಿಕೆ ಎಂದು ತಿಳಿಸಿದರು.

Key words: believe – Siddaramaiah – CM – 5 years-Former MLA -Yatindra Siddaramaiah.