‘’ಮೊದಲು ನನಗೆ ಕ್ಷೇತ್ರದ ಕೆಲಸ ಕಾರ್ಯ ಮುಖ್ಯ, ಬಳಿಕ ಪಕ್ಷ’’ : ಜಿ.ಟಿ.ದೇವೇಗೌಡ ಹೀಗೆ ಹೇಳಿದ್ದು ಯಾಕೆ…?

ಮೈಸೂರು,ಜನವರಿ,03,2021(www.justkannada.in) : ಜನವರಿ 7 ಕ್ಕೆ ಜೆಡಿಎಸ್ ನಿಷ್ಠಾವಂತರ ಸಭೆ. ಆದರೆ, ಸಭೆಗೆ ಬನ್ನಿ ಅಂತ ನನಗೆ ಯಾವುದೇ ಆಹ್ವಾನ ಬಂದಿಲ್ಲ. ಫ್ರೀ ಇದ್ರೆ ಹೋಗ್ತೀನಿ, ಮೊದಲು ನನಗೆ ಕ್ಷೇತ್ರದ ಕೆಲಸ ಕಾರ್ಯ ಮುಖ್ಯ, ಬಳಿಕ ಪಕ್ಷ. ಬಿಡುವಿದ್ದರೆ ಅಂದಿನ ಸಭೆಗೆ ಹೋಗ್ತೀನಿ ಎಂದು ಶಾಸಕ ಜಿ.ಟಿ.ದೇವೆಗೌಡ ಹೇಳಿದರು.

jk-logo-justkannada-mysore

2021 ಹೊಸ ವರ್ಷದಲ್ಲಿ ನನ್ನ ರಾಜಕೀಯ ಜೀವನದಲ್ಲಿ ಏನು ಬದಲಾವಣೆ ಇಲ್ಲ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. 2023ಕ್ಕೆ ಬದಲಾವಣೆ ಆಗಬಹುದು ಎಂದರು.

ಜೆಡಿಎಸ್ ಬಿಜೆಪಿ ಮೈತ್ರಿ, ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ನನ್ನ ಕೇಳಲಿಲ್ಲ..!

ಮೈಸೂರು ಮೇಯರ್ ಚುನಾವಣೆಯಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ವಿಚಾರ. ನಾನು‌ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೂ ನನ್ನ ಕೇಳಲಿಲ್ಲ. ನಾನು ಉಸ್ತುವಾರಿ ಸಚಿವನಲ್ಲ ಈಗ ನನ್ನ ಕೇಳ್ತಾರ. ಕೆಲ ಕಾರ್ಪೋರೇಟರ್‌ಗಳು ನನ್ನತ್ರ ಬಂದು ಡಿಸ್ಕಸ್ ಮಾಡಿದ್ದಾರೆ ಜೆಡಿಎಸ್ ನಾಯಕರ ವಿರುದ್ದ ಶಾಸಕ‌ ಜಿಟಿಡಿ ಅಸಮಾಧಾನವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್ ಸೂಚನೆಯಂತೆ ಹೋಗಿ ಅಂತ ಹೇಳಿದ್ದೇನೆ. ನನ್ನ ಜೊತೆ ಇರುವ ಕಾರ್ಪೋರೇಟರ್‌ಗಳಿಗೆ ಹಿಂದೆ ನನ್ನನ್ನ ಹೇಳಿ ಕೇಳಿ‌ ನಿರ್ಧಾರ ಮಾಡಿಲ್ಲ. ಆದ್ರೂ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳಿ ಎಂದು ಹೇಳಿದ್ದೇನೆ ಎಂದು ಹೇಳಿದರು.

ಕಾಲ ಚಕ್ರ ಉರುಳಿದಂತೆ ರಾಜಕೀಯ ಬದಲಾವಣೆ ಆಗುತ್ತೆ…!

ಎನ್‌ಡಿಎ ಜೊತೆ ಜೆಡಿಎಸ್‌ ಕೈ ಜೋಡಿಸುವ ವಿಚಾರ. ನಾನು ಕೂಡ ಮಾಧ್ಯಮಗಳಲ್ಲಿ ನೋಡುತ್ತಿದ್ದೇನೆ,‌ ನನ್ನ ಗಮನಕ್ಕೆ ಬಂದಿಲ್ಲ. ಕಾಲ ಚಕ್ರ ಉರುಳಿದಂತೆ ರಾಜಕೀಯ ಬದಲಾವಣೆ ಆಗುತ್ತೆ ಎಂದಿದ್ದಾರೆ.Before,that,field,Work,important,After,Party,G.T.Devegowda,Why,say,that?

ಹಿಂದೆ ಧರಮ್ ಸಿಂಗ್ ಸಿಎಂ, ಸಿದ್ದರಾಮಯ್ಯ ಡಿಸಿಎಂ ಆಗಿದ್ದರು. ಕುಮಾರಸ್ವಾಮಿ ಸಿಎಂ ಆದಾಗ ಯಡಿಯೂರಪ್ಪ ಡಿಸಿಎಂ ಆಗಿದ್ದರು. ಮತ್ತೆ 2018 ರಲ್ಲಿ ಕುಮಾರಸ್ವಾಮಿ ಸಿಎಂ ಆದಾಗ ಡಾ.ಜಿ.ಪರಮೇಶ್ವರ್ ಡಿಸಿಎಂ ಆಗಿದ್ದರು..ಹೀಗೆ ಕಾಲ ಚಕ್ರ ಉರುಳುತ್ತಾ ಇರುತ್ತೆ. ಆ‌ ಟೈಂಗೆ ಏನಾಗಬೇಕು ಅದು‌ ಆಗುತ್ತೆ. ಕಾಲಕ್ಕೆ ತಕ್ಕಂತೆ ಜೆಡಿಎಸ್ ಬದಲಾವಣೆ ಎಂದು ಪರೋಕ್ಷವಾಗಿ ಟೀಕಿಸಿದರು.

key words : Before-that-field-Work-important-After-Party-G.T.Devegowda-
Why-say-that?