ಕ್ರಿಕೆಟಿಗ ಶ್ರೀಶಾಂತ್’ಗೆ ಜೀವದಾನ ! 2020ಕ್ಕೆ ಕಮ್ ಬ್ಯಾಕ್ ಮಾಡಬಹುದು

ಮುಂಬೈ, ಆಗಸ್ಟ್ 21, 2019 (www.justkannada.in): ಮ್ಯಾಚ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೊಳಗಾಗಿದ್ದ ಟೀಂ ಇಂಡಿಯಾ ಮಾಜಿ ವೇಗಿ ಎಸ್ ಶ್ರೀಶಾಂತ್ ಗೆ ಸ್ವತಂತ್ರ ತನಿಖಾಧಿಕಾರಿ ಡಿಕೆ ಜೈನ್ ಜೀವದಾನ ನೀಡಿದ್ದಾರೆ.

ಕೇರಳ ವೇಗಿ ವಿರುದ್ಧ ಬಿಸಿಸಿಐ ಈ ಮೊದಲು ಹೇರಿದ್ದ ಜೀವಪರ್ಯಂತ ನಿಷೇಧ ನಿರ್ಧಾರವನ್ನು ಹಿಂಪಡೆಯುವಂತೆ ಸುಪ್ರೀಂಕೋರ್ಟ್ ಈ ಮೊದಲು ಆದೇಶಿಸಿತ್ತು.

ಈಗ ಸುಪ್ರೀಂಕೋರ್ಟ್ ನಿಯಮಿತ ತನಿಖಾಧಿಕಾರಿ ಡಿಕೆ ಜೈನ್ ಶ್ರೀಶಾಂತ್ ಮೇಲಿನ ನಿಷೇಧವನ್ನು ಏಳು ವರ್ಷಕ್ಕೆ ಕಡಿತಗೊಳಿಸಿ ಆದೇಶ ನೀಡಿದ್ದಾರೆ.  ಶ್ರೀಶಾಂತ್ 2020 ರಿಂದ ಕ್ರಿಕೆಟ್ ಕಣಕ್ಕೆ ಮರಳಬಹುದಾಗಿದೆ.

ಈ ಮೊದಲು ಶ್ರೀಶಾಂತ್ ವಿದೇಶೀ ಲೀಗ್ ನಲ್ಲಾದರೂ ಭಾಗವಹಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದರು. ಸದ್ಯಕ್ಕೆ ಶ್ರೀಶಾಂತ್ ಸಿನಿಮಾ ರಂಗದಲ್ಲಿ ಬ್ಯುಸಿಯಾಗಿದ್ದಾರೆ.