ಅತ್ತಿಗೆಯ ಕತ್ತು ಕೊಯ್ದು ಬರ್ಬರ ಹತ್ಯೆ ಮಾಡಿದ ಮೈದುನ : ಬಳಿಕ ತಾನೂ ಆತ್ಮಹತ್ಯೆಗೆ ಯತ್ನ…

ಬೆಂಗಳೂರು,ನವೆಂಬರ್,15,2020(www.justkannada.in): ಅತ್ತಿಗೆಯ ಕತ್ತುಕೊಯ್ದು ಹತ್ಯೆ ಮಾಡಿದ ಮೈದುನ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.kannada-journalist-media-fourth-estate-under-loss

ರಾಮಮೂರ್ತಿ ನಗರದ ಮುತ್ತು ಮಾರಿಯಮ್ಮ ದೇವಸ್ಥಾನದ ಬಳಿ ಈ ಘಟನೆ ನಡೆದಿದೆ. ಲಾವಣ್ಯ(37) ಮೃತಪಟ್ಟ ಮಹಿಳೆ. ಈಕೆಯ ತಂಗಿ ಗಂಡ ವಿಜಯ್ ಕುಮಾರ್ ಎಂಬಾತನೇ ಈ ಕೃತ್ಯವೆಸಗಿದ್ದಾನೆ.

ಆರೋಪಿ  ವಿಜಯ್ ಕುಮಾರ್ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಪೊಲೀಸ್ ಠಾಣೆಯಲ್ಲಿ ವಿಜಯ್ ಕುಮಾರ್ ವಿರುದ್ಧ ದೂರು ದಾಖಲಾಗಿತ್ತು. ಈ ನಡುವೆ ವಿಜಯ್ ಕುಮಾರ್  ರಾಜಿ ಮಾಡಿಕೊಳ್ಳಲು ಪತ್ನಿಯ ಅಕ್ಕ ಲಾವಣ್ಯ ಮತ್ತು ಇವರ ಪತಿ ವಾಸುಗೆ ಪೀಡಿಸುತ್ತಿದ್ದ ಎನ್ನಲಾಗಿದೆ.

ಈ ಕುರಿತು ಇಂದು ಮಾತನಾಡಲು ವಿಜಯ್ ಕುಮಾರ್ ಅತ್ತಿಗೆ ಲಾವಣ್ಯ ಮನೆಗೆ ಬಂದಿದ್ದು, ಈ ವೇಳೆ ಅತ್ತಿಗೆ ಲಾವಣ್ಯ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಬಳಿಕ ತಾನೂ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಹಲ್ಲೆಗೊಳಗಾದ ಲಾವಣ್ಯ ಮೃತಪಟ್ಟಿದ್ದು ಗಾಯಗೊಂಡ ವಿಜಯ್ ಕುಮಾರ್ ನನ್ನ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Bangalore-murdered – women-after –try-suciude