Saturday, August 8, 2026

BDA Apartments

Home Front Page ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದಿದ್ರೆ ಉಪವಾಸ ಸತ್ಯಾಗ್ರಹ- ಪೊಲೀಸ್ ಆಯುಕ್ತರಿಗೆ ಮಹದಾಯಿ ಹೋರಾಟಗಾರರಿಂದ ಪತ್ರ….

ರಾಜ್ಯಪಾಲರ ಭೇಟಿಗೆ ಅವಕಾಶ ಸಿಗದಿದ್ರೆ ಉಪವಾಸ ಸತ್ಯಾಗ್ರಹ- ಪೊಲೀಸ್ ಆಯುಕ್ತರಿಗೆ ಮಹದಾಯಿ ಹೋರಾಟಗಾರರಿಂದ ಪತ್ರ….

ಬೆಂಗಳೂರು,ಅ,19,2019(www.justkannada.in):  ಮಹದಾಯಿ, ಕಳಸಾ ಬಂಡೂರಿ ನಾಲಾ ಯೋಜನೆ ಅನುಷ್ಟಾನಕ್ಕೆ ಆಗ್ರಹಿ ಬೆಂಗಳೂರಿನಲ್ಲಿ  ಪ್ರತಿಭಟನೆ ನಡೆಸುತ್ತಿರುವ ರೈತರು, ರಾಜ್ಯಪಾಲರ ಭೇಟಿಗೆ ಅವಕಾಶ ನೀಡದಿದ್ದರೇ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ಮಹದಾಯಿ ಹೋರಾಟಗಾರರು, ರಾಜ್ಯಪಾಲರ ಭೇಟಿಗೆ ಅವಕಾಶ ಕೊಡಿ.  ಇಲ್ಲದಿದ್ದರೇ ರಾಜ್ಯಪಾಲರ ನಿರಾಕರಣೆ ಬಗ್ಗೆ ಲಿಖಿತ ಪತ್ರ ಕೊಡಿ. ರಾಜ್ಯಪಾಲರ ಭೇಟಿಗೆ ಅವಕಾಶ ನೀಡದಿದ್ದರೇ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಹೇಳಿದ್ದಾರೆ.

ಕಳಾಸ ಬಂಡೂರಿ ಯೋಜನೆ ಅನುಷ್ಟಾನ ಅಧಿಸೂಚನೆ ಹೊರಡಿಸಬೇಕು. ಇದಕ್ಕೆ ರಾಜ್ಯಪಾಲರು ಮತ್ತು ರಾಷ್ಟ್ರಪತಿಗಳು ಮಧ್ಯಪ್ರವೇಶಿಸುವಂತೆ  ಮಹದಾಯಿ ಹೋರಾಟಗಾರರು ಆಗ್ರಹಿಸಿದ್ದಾರೆ. ಕಳೆದ ಮೂರು ದಿನಗಳಿಂದ ಬೆಂಗಳೂರಿನ ರೈಲ್ವೆ ನಿಲ್ದಾಣದ ಬಳಿ ರೈತಮುಖಂಡರು ಪ್ರತಿಭಟನೆ ನಡೆಸುತ್ತಿದ್ದು ಯೋಜನೆ ಜಾರಿ ವಿಳಂಬ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words:  Bangalore- mahdayi-protest- police commissioner-letter-farmer