BREAKING NOW : ಚಾ.ನಗರ ಆಕ್ಸಿಜನ್ ದುರಂತದ ಮೃತ ಕುಟುಂಬಗಳಿಗೆ ತಕ್ಷಣ 2 ಲಕ್ಷ ರೂ.ಪರಿಹಾರ ನೀಡಿ : ಹೈಕೋರ್ಟ್ ಸೂಚನೆ.

ಬೆಂಗಳೂರು, ಮೇ 20, 2021 : (www.justkannada.in news ) ಚಾಮರಾಜನಗರ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದವರಿಗೆ ಪರಿಹಾರ ನೀಡಲು ಕೋರ್ಟ್ ಆದೇಶ.jk
24 ಮೃತರ ಸಂಬಂಧಿಕರಿಗೆ ತಕ್ಷಣಕ್ಕೆ 2 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಹೈಕೋರ್ಟ್ ಗೆ ಎಜಿ ಪ್ರಭುಲಿಂಗ್ ನಾವದಗಿ ಹೇಳಿಕೆ.
ಚಾಮರಾಜನಗರ ಆಕ್ಸಿಜನ್ ದುರ್ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ನೀಡಿದ್ದ ವರದಿ ಮೇರೆಗೆ ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯಿತು.bangalore-high-court-oxygen-tragidy-2lakhs-compensation-for-family
ಈ ವೇಳೆ ನ್ಯಾಯಾಲಯ, ನೀವು ನಿರ್ಧರಿಸಿರುವ ಪರಿಹಾರ ಹಣವನ್ನು ತಕ್ಷಣ ನೀಡಿ. ಪರಿಹಾರದ ಪ್ರಮಾಣದ ಬಗ್ಗೆ ನಂತರ ವಿಚಾರಣೆ ನಡೆಸುವುದಾಗಿ ಹೈಕೋರ್ಟ್ ವಿಭಾಗೀಯ ಪೀಠ ಅಭಿಪ್ರಾಯಪಟ್ಟಿತು.

KEY WORDS : Bangalore-high-court-oxygen-tragidy-2lakhs-compensation-for-family