ಖಾಸಗಿ ಸಾರಿಗೆ ಸಂಸ್ಥೆಗಳ ಬಂದ್ ರಾಜಕೀಯ ಪ್ರೇರಿತ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಸೆಪ್ಟಂಬರ್,11,2023(www.justkannada.in):  ಶಕ್ತಿಯೋಜನೆಯಿಂದಾಗುವ ನಷ್ಟ ಪರಿಹಾರ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಸಂಸ್ಥೆಗಳು ನಡೆಸಿದ ಮುಷ್ಕರ ರಾಜಕೀಯ ಪ್ರೇರಿತವಾದದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಟೀಕಿಸಿದ್ದಾರೆ.

ಈ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಖಾಗಿ ಬಸ್ ಅವರಿಗೆ ತೊಂದರೆ ಆಗಿರೋದು ನಿಜ. ಖಾಸಗಿ ಸಾರಿಗೆ ಒಕ್ಕೂಟಕ್ಕೆ ಹೋರಾಟ ಮಾಡುವ ಹಕ್ಕು ಇದೆ. ಖಾಸಗಿ ಬಸ್​​​​​, ಆಟೋ ಚಾಲಕರಿಗೆ ಸ್ವಲ್ಪ ಸಮಸ್ಯೆ ಆಗಿದೆ. ಓಲಾ, ಉಬರ್​​​ ವಾಹನದವರ ಮುಷ್ಕರ ರಾಜಕೀಯ ಪ್ರೇರಿತ. ರಾಜಕೀಯ ಪ್ರೇರಿತ ಹೋರಾಟ ಮಾಡುವ ಅವಶ್ಯಜತೆ ಇಲ್ಲ ಎಂದು ಹೇಳಿದರು.

ಈ ಕುರಿತು ಗೃಹ ಸಚಿವ ಡಾ ಜಿ.ಪರಮೇಶ್ವರ್ ಮಾತನಾಡಿ,  ಪ್ರತಿಭಟನೆ ವೇಳೆ ಎಲ್ಲೂ ಕೂಡ ದೊಡ್ಡ ಗಲಾಟೆಗಳೇನು ಆಗಿಲ್ಲ. ಅವರವರ ಮಧ್ಯೆ ಸಣ್ಣಪುಟ್ಟ ಗಲಾಟೆಗಳಾದ ವರದಿಯಾಗಿದೆ.  ನಾವು ಪ್ರತಿಭಟನೆ ಬಗ್ಗೆ ಮೊದಲೇ ಎಚ್ಚರಿಸಿದ್ದವು ಎಂದರು.

Key words: Bandh –private- transport -companies –politically- motivated- DCM -DK Shivakumar.