ಶತಾಯುಷಿ ಸಾಲುಮರದ ತಿಮ್ಮಕ್ಕರಿಂದ ಮತದಾನ.

ರಾಮನಗರ,ಮೇ,10,2023(www.justkannada.in):  ಶತಾಯುಷಿ, ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮಕ್ಕ ಅವರು ತಮ್ಮ ಮತದಾನದ ಹಕ್ಕು ಚಲಾಯಿಸಿದರು.

ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ಲು ಗ್ರಾಮದ ಮತಗಟ್ಟೆಗೆ ಆಗಮಿಸಿ ಸಾಲಮರದ ತಿಮ್ಮಕ್ಕ ಅವರು ಮತದಾನ ಮಾಡಿದರು.

ಮದುವೆ ಮಂಟಪದಿಂದ ಮತಗಟ್ಟೆಗೆ ಬಂದು ನವದಂಪತಿಯಿಂದ ಮತದಾನ.

ನವದಂಪತಿ ಮದುವೆ ಮುಗಿದ ಬಳಿಕ ಕಲ್ಯಾಣ ಮಂಟಪದಿಂದ ನೇರವಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ನಾಗದೇವನಹಳ್ಳಿ ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಕಿರಣ್, ಹರ್ಷಿತಾ ಜೋಡಿ ಇಂದು ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು. ನಂತರ ಮತಗಟ್ಟೆಗೆ ಆಗಮಿಸಿ ಇಬ್ಬರು ಒಟ್ಟಿಗೆ ಮತದಾನ ಮಾಡಿದರು.

Key words: assembly election-Voting – Salumarada Thimmakka.