ಯುವಕನ ಮೇಲೆ ಹಲ್ಲೆ ಬೆತ್ತಲೆ ಮೆರವಣಿಗೆ ಕೇಸ್: ಎಎಸ್ ಐ ಮತ್ತು ಸಹಾಯಕ ಮುಖ್ಯಪೇದೆ ಸಸ್ಪೆಂಡ್ ..

ಚಾಮರಾಜನಗರ,ಜೂ,14,2019(www.justkannada.in):  ದಲಿತ ಯುವಕನ ಮೇಲೆ ಹಲ್ಲೆ ಮಾಡಿ ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಂಡ್ಲುಪೇಟೆ ಪೊಲೀಸ್ ಠಾಣೆಯ ಎಎಸ್ ಐ ಮತ್ತು ಸಹಾಯಕ ಮುಖ್ಯಪೇದೆಯನ್ನ ಸಸ್ಪೆಂಡ್ ಮಾಡಲಾಗಿದೆ.

ಗುಂಡ್ಲುಪೇಟೆ ಪೊಲೀಸ್ ಠಾಣೆಯ ಎಎಸ್ ಐ  ರಾಜೇಂದ್ರ ಪ್ರಸಾದ್ ಮತ್ತು ಸಹಾಯಕ ಮುಖ್ಯಪೇದೆ ಶ್ರೀನಿವಾಸ್  ಅಮಾನತಾದವರು. ಜೂ 3ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ವೀರಾಪುರ ಗ್ರಾಮವ್ಯಾಪ್ತಿಯಲ್ಲಿ ದೇಗುಲದ ವಿಗ್ರಹ ಧ್ವಂಸಗೊಳಿಸಿದ್ದಾನೆಂದು ಆರೋಪಿಸಿ ದಲಿತ ಯುವಕನನ್ನ ಸ್ಥಳೀಯರು ಬೆತ್ತಲೆ ಮೆರವಣಿಗೆ ಮಾಡಿ ಥಳಿಸಿದ್ದರು.

ಈ ಕುರಿತು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ಸಂಬಂಧ ಗ್ರಾಮಸ್ಥರು ಬೆತ್ತಲೆಗೊಳಿಸಿ ಹಲ್ಲೆ ಮಾಡಿದ್ದ ಯುವಕನ್ನ ಪೊಲೀಸ್ ಠಾಣೆಗೆ ಕರೆತರುವಲ್ಲಿ ವಿಫಲರಾಗಿದ್ದಾರೆ ಎಂಬ ಕಾರಣಕ್ಕೆ ಎಎಸ್ ಐ  ರಾಜೇಂದ್ರ ಪ್ರಸಾದ್ ಮತ್ತು ಸಹಾಯಕ ಮುಖ್ಯಪೇದೆ ಶ್ರೀನಿವಾಸ್  ಅಮಾನತು ಮಾಡಿ ಚಾಮರಾಜನಗರ ಎಸ್ ಪಿ ಆನಂದ್ ಕುಮಾರ್ ಆದೇಶ ಹೊರಡಿಸಿದ್ದಾರೆ.

Key words: assault on a young man. ASI and Assistant Head Constable are suspended..

#assault #youngman #gundlupet #ASI #AssistantHeadConstable  #suspended..