ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ – ಆಹಾರ ಸಚಿವ ಕೆಎಚ್ ಮುನಿಯಪ್ಪ.

ಬೆಂಗಳೂರು,ಜೂನ್,30,2023(www.justkannada.in):  ಕೊಟ್ಟ ಮಾತಿನಂತೆ ನಾಳೆಯಿಂದಲೇ ಅನ್ನಭಾಗ್ಯ ಯೋಜನೆ ಜಾರಿ ಮಾಡುತ್ತೇವೆ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.

ಈ ಕುರಿತು ಇಂದು ಮಾತನಾಡಿದ ಸಚಿವ ಕೆ.ಎಚ್ ಮುನಿಯಪ್ಪ, ನಾಳೆಯಿಂದ ಅನ್ನಭಾಗ್ಯ ಯೋಜನೆ  ಜಾರಿಯಾಗಲಿದೆ. ಅಕೌಂಟ್ ಇಲ್ಲದವರು ಅಕೌಂಟ್ ಮಾಡಿಸಬೇಕು. ನಾಳೆಯಿಂದ 5 ಕೆಜಿ ಅಕ್ಕಿ ಜೊತೆ ಹಣ ಕೊಡುತ್ತೇವೆ. ಒಬ್ಬರಿಗೆ 170 ರೂ ಹಾಕುತ್ತೇವೆ.  ಕುಟುಂಬ ಸದಸ್ಯರ ಅಕೌಂಟ್ ಗೆ ಹಣ ಹಾಕುತ್ತೇವೆ ಎಂದರು.

ನಾಳೆಯಿಂದಲೇ  8 ಕೆಜಿ ಅಕ್ಕಿ 2 ಕೆಜಿ ರಾಗಿ ನೀಡಲು ತೀರ್ಮಾನ  ಮಾಡಲಾಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಜೋಳ ನೀಡಲು ಕ್ರಮ ವಹಿಸಲಾಗುತ್ತದೆ. ಅಕ್ಕಿ ನೀಡುವ ಬಗ್ಗೆ ಸಮಯ  ಹೇಳಲು ಆಗಲ್ಲ. ಅಕ್ಕಿ ಸಂಗ್ರಹಿಸಿ ಶೀಘ್ರವೇ ಹಂಚಿಕೆ ಮಾಡುತ್ತೇವೆ ಎಂದು ಕೆ.ಎಚ್ ಮುನಿಯಪ್ಪ ತಿಳಿಸಿದರು.

Key words:  Annabhagya Yojana – implemented – tomorrow – Food Minister- KH Muniappa.