ಹೆಚ್.ಡಿಕೆಗೆ ಬಿಜೆಪಿ ಜೊತೆ ಮೈತ್ರಿ ಸಮಾಧಾನ ತಂದಿಲ್ಲ-ಸಚಿವ ಚಲುವರಾಯಸ್ವಾಮಿ ವ್ಯಂಗ್ಯ.

ಮಂಡ್ಯ,ಮಾರ್ಚ್,20,2024(www.justkannada.in): ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ವಿಚಾರವಾಗಿ ಜೆಡಿಎಸ್ ಅಸಮಾಧಾನ ಕುರಿತು ಕೃಷಿ ಸಚಿವ ಚಲುವರಾಯಸ್ವಾಮಿ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಚಲುವರಾಯಸ್ವಾಮಿ, ಬಿಜೆಪಿಯಲ್ಲಿ ಸಾಕಷ್ಟು ಗೊಂದಲವಿದೆ.  ಜೆಡಿಎಸ್ ಪಕ್ಷದ ಮೇಲೆ ಅವರಿಗೇನೇ ಆತ್ಮವಿಶ್ವಾಸ ಕುಗ್ಗಿದೆ. ಹೆಚ್.ಡಿ ಕುಮಾರಸ್ವಾಮಿ  ನೋವು ಅವರ ಭಾವನೆಯಲ್ಲಿ ಗೊತ್ತಾಗ್ತಿದೆ. ಹೆಚ್.ಡಿ ಕುಮಾರಸ್ವಾಮಿಗೆ  ಮೈತ್ರಿ ಸಮಾಧಾನ ತಂದಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಈ ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಆದಾಗ ಜೆಡಿಎಸ್ ಗೆ  7 ಸ್ಥಾನ ಕೊಟ್ಟಿದ್ದವು. ಕುಮಾರಸ್ವಾಮಿ ಇದನ್ನ ಹೇಗೆ ಸರಿಪಡಿಸುತ್ತಾರೆ ನೋಡಬೇಕು ಎಂದು ಸಚಿವ ಚಲುವರಾಯಸ್ವಾಮಿ ತಿಳಿಸಿದರು.

ಇನ್ನು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಕುರಿತು ಪ್ರತಿಕ್ರಿಯಿಸಿದ ಸಚಿವ ಚಲುವರಾಯಸ್ವಾಮಿ, ನನ್ನ ಮಗನ ಮದುವೆ ಇತ್ತು. ಆಹ್ವಾನಿಸುವುದಕ್ಕೆ ಹೋಗಿದ್ದೆ ಎಂದರು.

Key words: Alliance – -BJP -JDS – HD Kumaraswamy – Minister-Chaluvarayaswamy