ಹೋರಾಟ ಮಾಡಿದವರಿಗೆಲ್ಲಾ ಮೀಸಲಾತಿ ಸಿಗಲ್ಲ- ಸಚಿವ ಕೆ.ಎಸ್ ಈಶ್ವರಪ್ಪ….

ಬೆಂಗಳೂರು,ಫೆಬ್ರವರಿ,19,2021(www.justkannada.in): ಹೋರಾಟ ಮಾಡಿದವರಿಗೆಲ್ಲಾ ಮೀಸಲಾತಿ ಸಿಗಲ್ಲ. ಯಾರು ಅರ್ಹರಿರುತ್ತಾರೋ ಅವರಿಗೆ  ಮೀಸಲಾತಿ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು.jk

ಮೀಸಲಾತಿ ಹೋರಾಟ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಚಿವ ಕೆ.ಎಸ್ ಈಶ್ವರಪ್ಪ, ಯಾವ ಸಮುದಾಯಕ್ಕೆ ಅನ್ಯಾಯವಾಗಿದೆ ಆ ಸಮುದಾಯಕ್ಕೆ ನ್ಯಾಯ ದೊರಕಿಸಿಕೊಡುತ್ತೇವೆ. ಹೈಕೋರ್ಟ್  ನಿವೃತ್ತ ನ್ಯಾಯಾಧೀಶರು ಈ ಬಗ್ಗೆ  ವರದಿ ನೀಡುತ್ತಾರೆ. ಎಲ್ಲಾ ಸ್ಥಿತಿಗತಿಗಳನ್ನ ಪರಿಶೀಲಸಿ ವರದಿ ನೀಡುತ್ತಾರೆ.  ಇನ್ನೊಬ್ಬರಿಗೆ ತೊಂದರೆ ಕೊಟ್ಟು ಮೀಸಲಾತಿ ನೀಡುವುದಿಲ್ಲ ಎಂದರು.

All those- fought -not reservation-Minister -KS Eshwarappa.
ಕೃಪೆ- internet

ಹಾಗೆಯೇ ಹೋರಾಟ ಮಾಡಿದವರಿಗೆಲ್ಲ ಮೀಸಲಾತಿ ಸಿಗುವುದಿಲ್ಲ. ಯಾರು ಅರ್ಹರಿರುತ್ತಾರೋ ಅವರಿಗೆ  ಮೀಸಲಾತಿ ಸಿಗಲಿದೆ ಎಂದರು.

Key words:  All those- fought -not reservation-Minister -KS Eshwarappa.