Thursday, August 20, 2026

BDA Apartments

Home Front Page ಎಲ್ಲಾ ತಾಲ್ಲೂಕುಗಳಲ್ಲಿ ಆಕ್ಸಿಜನ್ ಘಟಕ ಆರಂಭಿಸುತ್ತೇವೆ- ಸಚಿವ ಮುರುಗೇಶ್ ನಿರಾಣಿ…

ಎಲ್ಲಾ ತಾಲ್ಲೂಕುಗಳಲ್ಲಿ ಆಕ್ಸಿಜನ್ ಘಟಕ ಆರಂಭಿಸುತ್ತೇವೆ- ಸಚಿವ ಮುರುಗೇಶ್ ನಿರಾಣಿ…

ಕಲ್ಬುರ್ಗಿ,ಮೇ,18,2021(www.justkannada.in): ಕೆಕೆಆರ್ ಡಿಬಿ , ಗಣಿ ಇಲಾಖೆಯಿಂದ ರಾಜ್ಯದ ಎಲ್ಲಾ ತಾಲ್ಲೂಕುಗಳಲ್ಲಿ  ಆಕ್ಸಿಜನ್ ಘಟಕ ಆರಂಭಿಸುತ್ತೇವೆ ಎಂದು ಗಣಿ ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.jk

ಕಲ್ಬುರ್ಗಿಯಲ್ಲಿ ಮಾಧ್ಯಮಗಳ ಜತೆ ಇಂದು ಮಾತನಾಡಿದ ಸಚಿವ ಮುರುಗೇಶ್ ನಿರಾಣಿ, ಗ್ರಾಮೀಣ ಭಾಗಗಳಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿದೆ. ಹೀಗಾಗಿ ಸಿಸಿಸಿಗೆ ಸೇರಿಸಲು ಸೂಚನೆ ನೀಡಿದ್ದೇವೆ. ಶಾಲೆಗಳಲ್ಲಿ ಸಿಸಿಸಿ ಆರಂಭಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.all-taluks-start-oxygen-unit-minister-murugesh-nirani

ಇನ್ನು ರಾಜ್ಯದಲ್ಲಿ 100 ಮಂದಿಗೆ ಬ್ಲ್ಯಾಕ್ ಫಂಗಸ್ ಕಂಡು ಬಂದಿದೆ. ಎಲ್ಲೇ ಔಷಧವಿದ್ದರೂ ಅದನ್ನ ತರಿಸಿ ಕೊಡುತ್ತೇವೆ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.

Key words: all taluks -start – oxygen unit- Minister-Murugesh Nirani.