Saturday, August 8, 2026

BDA Apartments

Home Cinema ರೋಹಿಣಿ ಸಿಂಧೂರಿ ಟ್ರಾನ್ಸ್’ಫರ್: ಬೇಸರ ವ್ಯಕ್ತಪಡಿಸಿದ ರಮ್ಯಾ

ರೋಹಿಣಿ ಸಿಂಧೂರಿ ಟ್ರಾನ್ಸ್’ಫರ್: ಬೇಸರ ವ್ಯಕ್ತಪಡಿಸಿದ ರಮ್ಯಾ

ಬೆಂಗಳೂರು, ಜೂನ್ 10, 2021 (www.justkannada.in): ನಟಿ, ಮಾಜಿ ಸಂಸದೆ ರಮ್ಯಾ ರೋಹಿಣಿ ಸಿಂಧೂರಿ ಪರವಾಗಿ ಮಾತನಾಡಿದ್ದಾರೆ.

ಈ ಬಗ್ಗೆ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ರಮ್ಯಾ,ರೋಹಿಣಿ ಸಿಂಧೂರಿ ಕಾರ್ಯ ವೈಖರಿಯನ್ನು ನಾನು ಅಂದು ಮೆಚ್ಚಿದ್ದೇನೆ, ಈಗಲೂ ಮೆಚ್ಚಿಕೊಳ್ಳುತ್ತೇನೆ ಎಂದಿದ್ದಾರೆ.

ಇಂದಿನ ರಾಜಕೀಯ, ಉತ್ತಮ ಕೆಲಸಗಳನ್ನು, ಪ್ರಾಮಾಣಿಕ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿಲ್ಲ ಹಾಗೂ ಬೆಂಬಲಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರನ್ನು ಮೈಸೂರಿನಿಂದ ವರ್ಗಾವಣೆ ಮಾಡಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.