ಸ್ಪೀಡ್ ಆಗಿ ಬೈಕ್ ಓಡಿಸುತ್ತಿದ್ದವರಿಗೆ ರಸ್ತೆಯಲ್ಲಿ ಬುದ್ಧಿ ಹೇಳಿದ ಕಿಚ್ಚ

ಬೆಂಗಳೂರು, ಡಿಸೆಂಬರ್ 19, 2019 (ww.justkannada.in): ಸ್ಪೀಡ್ ಆಗಿ ಬೈಕ್ ಓಡಿಸುತ್ತಿದ್ದವರಿಗೆ ಕಿಚ್ಚ ಬುದ್ಧಿವಾದ ಹೇಳಿದ್ದಾರೆ.

ಹೌದು. ರಸ್ತೆಯಲ್ಲಿ ಅತೀ ವೇಗವಾಗಿ ಗಾಡಿ ಓಡಿಸುತ್ತಿದ್ದವರನ್ನು ಕಂಡು ಗಾಬರಿ ಆದ ಸುದೀಪ್, ಅವರನ್ನು ನಿಲ್ಲಿಸಿ ”ಏನ್ರೀ ಇಷ್ಟು ವೇಗವಾಗಿ ಬರ್ತಿದ್ದೀರಾ” ಎಂದು ಪ್ರಶ್ನಿಸಿದ್ದಾರೆ. ತಕ್ಷಣ ಬೈಕ್ ಓಡಿಸುತ್ತಿದ್ದವರು ”ಸಾರಿ ಸಾರ್” ಅಂತ ಹೇಳಿ ಸ್ಪೀಡ್ ನ ಕಂಟ್ರೋಲ್ ಮಾಡಿಕೊಂಡು ತೆರಳಿದರು.

ದ್ವಿಚಕ್ರ ವಾಹನ ಸವಾರರಿಗೆ ಸುದೀಪ್ ”ನಿಧಾನವಾಗಿ ಚಲಿಸಿ” ಅಂತ ಸಲಹೆ ಕೊಟ್ಟಿರುವ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.