ಈ ಶುಕ್ರವಾರ ಥಿಯೇಟರ್’ಗೆ ಗೋಲ್ಡನ್ ಸ್ಟಾರ್’ನ ‘ಗೀತಾ’

ಬೆಂಗಳೂರು, ಸೆಪ್ಟೆಂಬರ್ 25, 2019 (www.justkannada.in): ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರ ‘ಗೀತಾ’ ಈ ಶುಕ್ರವಾರ ಬಿಡುಗಡೆಯಾಗಲಿದೆ.

‘ಕರ್ನಾಟಕದಲ್ಲಿ ಕನ್ನಡಿಗನೇ ಯಜಮಾನ, ಕನ್ನಡಿಗನೇ ಸಾರ್ವಭೌಮ’ ಎನ್ನುವ ಡೈಲಾಗ್ ಕನ್ನಡಿಗರನ್ನು ಸೆಳೆದಿದ್ದು, ಸೆಪ್ಟಂಬರ್ 27 ರಿಂದ ಥಿಯೇಟರ್ ನಲ್ಲಿ ಗೋಲ್ಡನ್ ಆರ್ಭಟ ಶುರುವಾಗಲಿದೆ.

ಚಿತ್ರದಲ್ಲಿ ಗಣೇಶ್ ಕನ್ನಡ ಹೋರಾಟಗಾರನಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ನಾಗೇಂದ್ರ ಚಿತ್ರ ನಿರ್ದೇಶನ ಮಾಡಿದ್ದು, ಗಣೇಶ್, ಶಾನ್ವಿ ಶ್ರೀವಾಸ್ತವ್, ಸುಧಾರಾಣಿ ಮೊದಲಾದವರು ಅಭಿನಯಿಸಿದ್ದಾರೆ.