ಮಂಡ್ಯ ಗೋ ಶಾಲೆಗಳಿಗೆ ‘ದಾಸನ’ ನೆರವು !

ಬೆಂಗಳೂರು, ಜನವರಿ 20, 2019 (www.justkannada.in): ಮಂಡ್ಯ ಭಾಗದ ಗೋ ಶಾಲೆಯ ಹಸುಗಳಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 15 ಲೋಡ್ ಮೇವು ಸಹಾಯ ಮಾಡಿದ್ದಾರೆ.

ಈ ಬಾರಿ ಮಂಡ್ಯ ಭಾಗದ ರೈತರು ಬರದಿಂದ ಕಂಗೆಟ್ಟಿದ್ದಾರೆ. ಅತ್ತ ಗೋಶಾಲೆಗಳಲ್ಲಿರುವ ಹಸುಗಳಿಗೂ ಮೇವಿನ ಸಮಸ್ಯೆ ತಲೆದೂರಿದೆ. ಈ ವಿಷಯ ದರ್ಶನ್ ರಿಗೆ ಗೊತ್ತಾಗಿದ್ದೇ ತಡ, ಆ ಭಾಗದ ದೊಡ್ಡ ಬ್ಯಾಡರ ಹಳ್ಳಿ ಗ್ರಾಮಕ್ಕೆ ಬೇಟಿ ನೀಡಿದ್ದಾರೆ.

ಚೈತ್ರ ಗೋ ಶಾಲೆಗೆ 15 ಟ್ರಾಕ್ಟರ್ ಗಳಷ್ಟು ಮೇವು ದಾನ ಮಾಡಿ ತಮ್ಮ ಪ್ರಾಣಿ ಪ್ರೀತಿಯನ್ನು ಮರೆದಿದ್ದಾರೆ. ಇನ್ನು ದರ್ಶನ್ ಭೇಟಿ ನೀಡಿರುವ ಫೋಟೋ ಮತ್ತು ಟ್ರ್ಯಾಕ್ಟರ್ ಗಳ ಮೂಲಕ ಸಾಗುತ್ತಿರುವ ಹುಲ್ಲಿನ ರಾಶಿಯ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.