Friday, August 14, 2026

BDA Apartments

Home Crime ಕೋಲಾರ ಜಿಲ್ಲೆಯಲ್ಲಿ ತಹಸೀಲ್ದಾರ್ ಗೆ ಚಾಕುವಿನಿಂದ ಇರಿದ ನಿವೃತ್ತ ಶಿಕ್ಷಕ

ಕೋಲಾರ ಜಿಲ್ಲೆಯಲ್ಲಿ ತಹಸೀಲ್ದಾರ್ ಗೆ ಚಾಕುವಿನಿಂದ ಇರಿದ ನಿವೃತ್ತ ಶಿಕ್ಷಕ

ಕೋಲಾರ, ಜುಲೈ 09, 2020 (www.justkannada.in): ಸರ್ವೇ ನಡೆಸಲು ಹೋದ ತಹಸೀಲ್ದಾರ್ ಗೆ ಚಾಕುವಿನಿಂದ ಇರಿಯಲಾಗಿದೆ.

ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಳವಂಚಿ ಗ್ರಾಮದಲ್ಲಿ ಘಟನೆ ನಡೆದಿದೆ. ಬಂಗಾರಪೇಟೆಯ ಚಂದ್ರಮೌಳೇಶ್ವರ ಚಾಕು ಇರಿತಕ್ಕೆ ಒಳಗಾದ ತಹಸೀಲ್ದಾರ್.

ನಿವೃತ್ತ ಶಿಕ್ಷಕ ವೆಂಕಟಾಚಲಪತಿ ಚಾಕು ಇರಿದಿದ್ದು, ಗಂಭೀರ ಸ್ಥಿತಿಯಲ್ಲಿರುವ ತಹಶಸೀಲ್ದಾರ್ ರನ್ನು ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪರಾರಿಯಾಗಿದ್ದು, ಕಾಮಸಮುದ್ರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.