Thursday, July 30, 2026

BDA Apartments

Home Front Page ಪ್ರವೀಣ್ ಹತ್ಯೆ ಪ್ರಕರಣ: ಉಳಿದ ಆರೋಪಿಗಳಿಗಾಗಿ ಶೋಧ: ತನಿಖೆ ಬಳಿಕ ಎಲ್ಲವೂ ಗೊತ್ತಾಗುತ್ತೆ- ಸಿಎಂ ಬಸವರಾಜ...

ಪ್ರವೀಣ್ ಹತ್ಯೆ ಪ್ರಕರಣ: ಉಳಿದ ಆರೋಪಿಗಳಿಗಾಗಿ ಶೋಧ: ತನಿಖೆ ಬಳಿಕ ಎಲ್ಲವೂ ಗೊತ್ತಾಗುತ್ತೆ- ಸಿಎಂ ಬಸವರಾಜ ಬೊಮ್ಮಾಯಿ.

ಮಂಗಳೂರು,ಜುಲೈ,28,2022(www.justkannada.in):  ಹತ್ಯೆಯಾದ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಲು ಸಿಎಂ ಬಸವರಾಜ ಬೊಮ್ಮಾಯಿ ಮಂಗಳೂರಿಗೆ ಆಗಮಿಸಿದ್ದಾರೆ.

ಮಂಗಳೂರು ಏರ್ ಪೋರ್ಟ್ ನಲ್ಲಿ ಮಾತನಾಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಪ್ರಕರಣ ಸಂಬಂಧ ಇಬ್ಬರನ್ನ ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸುತ್ತಿದೆ. ಕೇರಳ ಪೊಲೀಸರು ಉತ್ತಮವಾಗಿ ಸಹಕಾರ ನೀಡಿದ್ದಾರೆ. ಪೊಲೀಸರಿಗೆ ಮುಕ್ತ ಅವಕಾಶ ನೀಡಿದ್ದೇವೆ.  ಆದಷ್ಟು ಬೇಗ ಎಲ್ಲಾ ಆರೋಪಿಗಳ ಬಂಧನವಾಗುತ್ತೆ ಎಂದರು.

ಪ್ರವೀಣ್ ಕುಟುಂಬಸ್ಥರ ಭೇಟಿ ಬಳಿಕ ಪರಿಹಾರ ಘೋಷಿಸುವೆ. ತನಿಖೆ ಬಳಿಕ ಎಲ್ಲವೂ ಗೊತ್ತಾಗುತ್ತೆ. ತನಿಖೆ ಮುಂಚೆ ಏನನ್ನು ಹೇಳಲು ಆಗಲ್ಲ.  ಹತ್ಯೆ ಹಿಂದೆ ಯಾವ ಸಂಘಟನೆ ಇದೆ ಅಂತಾ ಗೊತ್ತಾಗುತ್ತೆ ಎಂದರು.

Key words: Praveen- murder-case-investigation – CM Basavaraja Bommai.