Friday, August 14, 2026

BDA Apartments

Home Crime ಸಿದ್ಧಾರ್ಥ್ ನಾಪತ್ತೆ ಕೇಸ್: ಸ್ಥಳಕ್ಕೆ ದ.ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ, ಪರಿಶೀಲನೆ..

ಸಿದ್ಧಾರ್ಥ್ ನಾಪತ್ತೆ ಕೇಸ್: ಸ್ಥಳಕ್ಕೆ ದ.ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ, ಪರಿಶೀಲನೆ..

ದಕ್ಷಿಣ ಕನ್ನಡ,ಜು,30,2019(www.justkannada.in): ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಕಾಫಿಡೇ ಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಹಿನ್ನೆಲೆ  ಶೋಧಕಾರ್ಯ ನಡೆಯುತ್ತಿರುವ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಭೇಟಿ ನೀಡಿದ್ದಾರೆ.

ಮಾಜಿ ಸಿಎಂ ಎಸ್.ಎಂ.ಕೃಷ್ಣ ಅಳಿಯ ಸಿದ್ಧಾರ್ಥ ಮಂಗಳೂರಿನ ತೊಕ್ಕೊಟ್ಟು ನೇತ್ರಾವತಿ ಸೇತುವೆ ಮೇಲಿನಿಂದ ನಾಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ   ನಿನ್ನೆ ರಾತ್ರಿಯಿಂದ ನದಿಯಲ್ಲಿ ಶೋಧಕಾರ್ಯ  ನಡೆಸಲಾಗುತ್ತಿದೆ.

ಈ ನಡುವೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಸಸಿಕಾಂತ್ ಸೆಂಥಿಲ್,  ಶೋಧಕಾರ್ಯಾಚರಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ.  ಹೆಚ್ಚಿನ ಬೋಟ್ ಗಳನ್ನ ಬಳಸಿ ಶೋಧ ಕಾರ್ಯ ಚುರುಕುಗೊಳಿಸಲಾಗಿದೆ. ಕಾರವಾರದಿಂದ ಮುಳುಗು ತಜ್ಞರನ್ನ ಕರೆಸಿದ್ದೇವೆ. ಪೊಲೀಸ್ ಇಲಾಖೆ ಪ್ರಕರಣ ಕುರಿತು ತನಿಖೆ ನಡೆಸುತ್ತಿದೆ ಎಂದು ಮಾಹಿತಿ ನೀಡಿದರು.

Key words: Coffee Day- Founder- Siddharth-Inspection –dakshina kannada-DC sasikumar senthil- visit