Tuesday, September 15, 2026

BDA Apartments

ಮೈಸೂರಿನಲ್ಲಿ ‘ಅಪ್ಪು’ ಪುತ್ಥಳಿ ಸ್ಥಾಪನೆಗೆ ಅನುಮತಿ ನಿರಾಕರಣೆ BDA JK_Adv BDA Adv
Home Cinema ಮೈಸೂರಿನಲ್ಲಿ ‘ಅಪ್ಪು’ ಪುತ್ಥಳಿ ಸ್ಥಾಪನೆಗೆ ಅನುಮತಿ ನಿರಾಕರಣೆ.

ಮೈಸೂರಿನಲ್ಲಿ ‘ಅಪ್ಪು’ ಪುತ್ಥಳಿ ಸ್ಥಾಪನೆಗೆ ಅನುಮತಿ ನಿರಾಕರಣೆ.

ಮೈಸೂರು,ಡಿಸೆಂಬರ್,3,2021(www.justkannada.in):  ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪುತ್ಹಳಿಯನ್ನ ಸ್ಥಾಪಿಸಲು ಮೈಸೂರಿನಲ್ಲಿ ಅನುಮತಿ ನಿರಾಕರಿಸಲಾಗಿದೆ.

ಮೈಸೂರಿನ ಲಿಂಗಾಬುದಿ ಪಾಳ್ಯದಲ್ಲಿ ಈ ಘಟನೆ ನಡೆದಿದೆ. ಲಿಂಗಾಬುದಿ ಪಾಳ್ಯದ ರಿಂಗ್ ರಸ್ತೆಯಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ಪುತ್ಥಳಿ ಸ್ಥಾಪನೆಗೆ ಅಭಿಮಾನಿಗಳು ತಯಾರಿ ನಡೆಸುತ್ತಿದ್ದರು. ಆದರೆ ಸಾರ್ವಜನಿಕ ಸ್ಥಳದಲ್ಲಿ ಪುತ್ಥಳಿ ಹಾಕಬಾರದು ಎಂದು ಹೇಳಿ ಪೊಲೀಸರು ಪುತ್ಥಳಿ ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿದ ನಟ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಪುತ್ಥಳಿ ವಾಪಸ್ಸು ಕೊಡುವಂತೆ ಆಗ್ರಹಿಸಿದರು. ಈ ವೇಳೆ ಕುವೆಂಪು ನಗರ ಪೊಲೀಸ್ ಠಾಣೆ ಮುಂದೆ ಜಮಾಯಿಸಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದರು.

Key words: no permission –punith rajkumar-statue- Mysore.