Tuesday, August 18, 2026

BDA Apartments

Home Front Page ಪಕ್ಷೇತರ ಶಾಸಕರಿಬ್ಬರಿಗಾಗಿ  ಅಪಾರ್ಟ್ ಮೆಂಟ್ ಬಳಿ ಕೈ –ಕಮಲ ಕಾರ್ಯಕರ್ತರ ನಡುವೆ ಕಿತ್ತಾಟ: ಪರಿಸ್ಥಿತಿ ನಿಯಂತ್ರಿಸಲು...

ಪಕ್ಷೇತರ ಶಾಸಕರಿಬ್ಬರಿಗಾಗಿ  ಅಪಾರ್ಟ್ ಮೆಂಟ್ ಬಳಿ ಕೈ –ಕಮಲ ಕಾರ್ಯಕರ್ತರ ನಡುವೆ ಕಿತ್ತಾಟ: ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಹರಸಾಹಸ …

ಬೆಂಗಳೂರು,ಜು,23,2019(www.justkannada.in):  ಸಿಎಂ ಹೆಚ್.ಡಿ ಕುಮಾರಸ್ವಾಮಿ ಇಂದು ವಿಶ್ವಾಸಮತಯಾಚನೆ ಸಾಭೀತು ಪಡಸಲೇ ಬೇಕಾಗಿದ್ದು, ಸಮ್ಮಿಶ್ರ ಸರ್ಕಾರ ಉಳಿಯುತ್ತದೆಯೋ ಇಲ್ಲವೋ ಎಂಬುದು ಇಂದು ನಿರ್ಧಾರವಾಗಲಿದೆ. ಈ ನಡುವೆ  ಇಬ್ಬರು ಪಕ್ಷೇತರ ಶಾಸಕರಿಗಾಗಿ ನಿತೇಶ್ ಅಪಾರ್ಟ್ ಮೆಂಟ್ ಬಳಿ  ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ  ನಿತೇಶ್ ಅಪಾರ್ಟ್ ಮೆಂಟ್  ನಲ್ಲಿ ಇಬ್ಬರು ಪಕ್ಷೇತರ ಶಾಸಕರು ವಾಸ್ತವ್ಯ ಹೂಡಿದ್ದಾರೆ. ಇಬ್ಬರು ಶಾಸಕರು ಈಗಾಗಲೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ನಡುವೆ ಅಪಾರ್ಟ್ ಮೆಂಟ್ ಬಳಿ ದೊಡ್ಡ ಹೈಡ್ರಾಮವೇ ನಡೆದಿದೆ.  ಇಬ್ಬರು ಪಕ್ಷೇತರ ಶಾಸಕರನ್ನ ತಮ್ಮ ಕಡೆ ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಮುಂದಾಗಿದ್ದು ಎರಡು ಪಕ್ಷದ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ.

ಈ ಮಧ್ಯೆ ಕಾಂಗ್ರೆಸ್ ಕಾರ್ಯಕರ್ತರು ನಿತೇಶ್ ಅಪಾರ್ಟ್ ಮೆಂಟ್ ನುಗ್ಗಲು ಯತ್ನಿಸಿದ್ದು ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.  ಬಿಜೆಪಿ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಘೋಷಣೆ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Key words: Quarrel –between- Congress –BJP- workers –bangalore-independent MLAs