Wednesday, August 5, 2026

BDA Apartments

Home Front Page ಅ.2 ಗಾಂಧಿ ಜಯಂತಿ ದಿನದಂದು ನೂತನ ವಿಜಯನಗರ ಜಿಲ್ಲೆಗೆ ಚಾಲನೆ- ಸಚಿವ ಆನಂದ್ ಸಿಂಗ್.

ಅ.2 ಗಾಂಧಿ ಜಯಂತಿ ದಿನದಂದು ನೂತನ ವಿಜಯನಗರ ಜಿಲ್ಲೆಗೆ ಚಾಲನೆ- ಸಚಿವ ಆನಂದ್ ಸಿಂಗ್.

ವಿಜಯನಗರ,ಸೆಪ್ಟಂಬರ್,17,2021(www.justkannada.in):  ಅಕ್ಟೋಬರ್ 2 ಮಹಾತ್ಮ ಗಾಂಧಿ ಜಯಂತಿ ದಿನದಂದು ನೂತನ ವಿಜಯನಗರ ಜಿಲ್ಲೆಯನ್ನ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು.

ಕಲ್ಯಾಣ ಕರ್ನಾಟಕ ವಿಮೋಚನಾ ದಿನದ ಅಂಗವಾಗಿ  ಇಂದು ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಚಿವ ಆನಂದ್ ಸಿಂಗ್, ಅಕ್ಟೋಬರ್ 2 ಮತ್ತು 3ರಂದು ಎರಡು ದಿನ ಕಾರ್ಯಕ್ರಮ ಮಾಡಲಾಗುತ್ತದೆ.  ಅಕ್ಟೋಬರ್ 2 ರಂದು ಸಿಎಂ ಬೊಮ್ಮಾಯಿ ನೂತನ ವಿಜಯನಗರ ಜಿಲ್ಲೆಗೆ ಚಾಲನೆ ನೀಡಲಿದ್ದಾರೆ. ವಿಜಯನಗರ ರಚನೆಗೆ ಕಾರಣರಾದ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಅಕ್ಟೋಬರ್ 2ರ ನಂತರ ಜಿಲ್ಲೆ ಕಟ್ಟುವ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಜಿಲ್ಲಾಧಿಕಾರಿ, ಎಸ್ಪಿ ಸೇರಿದಂತೆ ಪ್ರಮುಖ ಕಚೇರಿಗಳನ್ನು ಆರಂಭಿಸಲಾಗುವುದು. ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ವೇಗ ಕೊಡಲಾಗುವುದು ಎಂದು  ಸಚಿವ ಆನಂದ್ ಸಿಂಗ್  ತಿಳಿಸಿದರು.

Key words: October 2-  New- Vijayanagar- District -Gandhi Jayanti-Minister- Anand Singh.