Saturday, September 5, 2026

BDA Apartments

Home Front Page ಸಾಧನೆ, ಹೋರಾಟದ  ಬಗ್ಗೆ ಮಾತನಾಡದ ಬಿಎಸ್ ವೈ: ಈಶ್ವರಪ್ಪ ರಾಜಕಾರಣಿಯಾಗಲು ಯೋಗ್ಯರಲ್ಲ- ದಿನೇಶ್ ಗುಂಡೂರಾವ್ ಕಿಡಿ…

ಸಾಧನೆ, ಹೋರಾಟದ  ಬಗ್ಗೆ ಮಾತನಾಡದ ಬಿಎಸ್ ವೈ: ಈಶ್ವರಪ್ಪ ರಾಜಕಾರಣಿಯಾಗಲು ಯೋಗ್ಯರಲ್ಲ- ದಿನೇಶ್ ಗುಂಡೂರಾವ್ ಕಿಡಿ…

ಕಲಬುರಗಿ,ಮೇ,7,2019(www.justkannada.in): ಬಿಎಸ್ ಯಡಿಯೂರಪ್ಪ ಸಾಧನೆ ಹೋರಾಟದ ಬಗ್ಗೆ ಮಾತನಾಡಲ್ಲ. ಸಿಎಂ ಆಗುವುದೇ ಅವರಿಗೆ ಹೋರಾಟ ಮಾಡಿದಂತೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದರು.

ಕಲ್ಬುರ್ಗಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,  ರಾಜ್ಯದಲ್ಲಿ 22 ಸ್ಥಾನ ಬೈ ಎಲೆಕ್ಷನ್ ಗೆಲ್ಲುತ್ತೇವೆ ಎಂದು ಹೇಳ್ತಾರೆ. ಆದರೆ ಅವರು ಸಾಧನೆ ಹೋರಾಟದ ಬಗ್ಗೆ ಮಾತನಾಡಲ್ಲ. ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ನೋಡಿಕೊಂಡು ಸುಮ್ಮನೆ ಕುಳಿತಿದ್ದಾರೆ ಎಂದು ಕಿಡಿಕಾರಿದರು.

ಇದೇ ವೇಳೆ ಕೆ.ಎಸ್ ಈಶ್ವರಪ್ಪ ವಿರುದ್ದ ವಾಗ್ದಾಳಿ ನಡೆಸಿದ ದಿನೇಶ್ ಗುಂಡೂರಾವ್, ಕೆ.ಎಸ್ ಈಶ್ವರಪ್ಪ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ.  ಅವರು ರಾಜಕಾರಣಿ ಆಗಲು ಯೋಗ್ಯರಲ್ಲ. ಬಿಜೆಪಿಯವರಿಗೆ ನೈತಿಕತೆ  ಇದ್ರೆ ಈಶ್ವರಪ್ಪ ಬಾಯಿ ಮುಚ್ಚಿಸಲಿ. ಕೆ.ಎಸ್ ಈಶ್ವರಪ್ಪ ಜನರ ಬಳಿ ಕ್ಷಮೆ ಕೇಳಬೇಕು. ಬಿಜೆಪಿ ಅವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಲ್ಲವಾದರೇ ಭಾರತ್​ ಮಾತಾಕಿ ಜೈ ಎಂದು ಘೋಷಣೆ ಕೂಗುವುದನ್ನು ನಿಲ್ಲಿಸಬೇಕು ಎಂದು ಹರಿಹಾಯ್ದರು

ಮಾಜಿ ಶಾಸಕ ಉಮೇಶ್ ಜಾಧವ್​ಗೆ ತಕ್ಕ ಪಾಠ ಕಲಿಸಲು ಮತದಾರರು ನಿರ್ಧರಿಸಿದ್ದಾರೆ. ಸುಳ್ಳಿನ ಸರಮಾಲೆಗಳನ್ನ ಹೆಣೆದು ಕಾಂಗ್ರೆಸ್ ಬಿಟ್ಟು ಹೋಗಿದ್ದಾರೆ. ಜಾಧವ್ ತಮ್ಮ ಸ್ವಾರ್ಥ ಸಾಧನೆಗಾಗಿ ಪಕ್ಷ ಬಿಟ್ಟು ತೆರಳಿದ್ದಾರೆ ಎಂದು ದಿನೇಶ್ ಗುಂಡೂರಾವ್  ಕಿಡಿಕಾರಿದರು.

Key words: KS Ishwarappa – not  -being politician-  Dinesh Gundurao